Sabarimala Mandala Pooja – ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ – Top Devotional Stories
Read this-Swamy Ayyappa ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ Top Devotional song
ಜಾತಿ, ಮತಗಳ ಭೇದವಿಲ್ಲದೆ, ಲಕ್ಷಾಂತರ ಜನರು ಪ್ರತಿ ವರ್ಷ ಶಬರಿಮಲೆಗೆ ಹಾರ ಮತ್ತು ಇರುಮುಡಿಗಳನ್ನು ಅರ್ಪಿಸಲು, ಅಯ್ಯಪ್ಪನ ಸ್ತೋತ್ರಗಳನ್ನು ಪಠಿಸಲು, ಪಂಪಾ ನದಿಯಲ್ಲಿ ಪುಣ್ಯಸ್ನಾನ ಮಾಡಲು ಮತ್ತು ಹದಿನೆಂಟು ಮೆಟ್ಟಿಲುಗಳನ್ನು ಹತ್ತಲು ಭಗವಾನ್ ಅಯ್ಯಪ್ಪನ ದರ್ಶನವನ್ನು ಪಡೆಯುವ ಭರವಸೆಯೊಂದಿಗೆ ಶಬರಿಮಲೆಯಲ್ಲಿ ಸೇರುತ್ತಾರೆ. ಶಬರಿಮಲೆ ದೇಗುಲಕ್ಕೆ ಮೀಸಲಾಗಿರುವ 41 ದಿನಗಳ ಅವಧಿಯನ್ನು ಮಂಡಲ ಕಾಲಂ ಅಥವಾ ಮಂಡಲ ಮಾಸಂ ಇದನ್ನು ಮಂಡಲ ಪೂಜೆ ಎಂದೂ ಕರೆಯುತ್ತಾರೆ. ಅಯ್ಯಪ್ಪನ ಭಕ್ತರು ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ತಮ್ಮ ಪ್ರತಿಜ್ಞೆಗಳನ್ನು ಪೂರೈಸಲು 41 ದಿನಗಳ ವ್ರತವನ್ನು ಪ್ರಾರಂಭಿಸುತ್ತಾರೆ. ಶಬರಿಮಲೆ ಮಂಡಲ ಪೂಜೆಗೆ ಸಂಬಂಧಿಸಿದಂತೆ ಒಂದಿಷ್ಟು ವಿಚಾರಗಳನ್ನು ಇಲ್ಲಿ ತಿಳಿಯೋಣ..
1. ಮಂಡಲ ಪೂಜೆಯ ನಿಯಮಗಳು ಹೀಗಿವೆ:
-41 ದಿನಗಳ ಕಾಲ ಮುಂಜಾನೆ ಬೇಗ ಎದ್ದು ತಣ್ಣೀರಿನ ಸ್ನಾನವನ್ನು ಮಾಡಿ ಶುದ್ಧರಾಗಬೇಕು.
– 41 ದಿನಗಳ ಕೇವಲ ಸಾತ್ವಿಕ ಆಹಾರವನ್ನು ಸೇವಿಸಬೇಕು.
– ವ್ರತಧಾರಿಗಳು ಸಾಮಾನ್ಯವಾಗಿ ಕಪ್ಪು ಬಟ್ಟೆಗಳನ್ನು ಧರಿಸಬೇಕು ಮತ್ತು ಪೆಂಡೆಂಟ್ನಲ್ಲಿ ಭಗವಾನ್ ಅಯ್ಯಪ್ಪನ ಚಿತ್ರವಿರುವ ರುದ್ರಾಕ್ಷಿ ಅಥವಾ ತುಳಸಿ ಮಾಲೆಯನ್ನು ಧರಿಸಬೇಕು.
– ಭಕ್ತರನ್ನು ‘ಸ್ವಾಮಿ’ ಅಥವಾ ‘ಅಯ್ಯಪ್ಪನ್’ ಎಂದು ಕರೆಯಬೇಕೆ ಹೊರತು ಏಕವಚನದಿಂದ ಕರೆಯಬಾರದು.
– ಹೆಚ್ಚಿನ ಭಕ್ತರು ಬರಿಗಾಲಿನಲ್ಲಿ ನಡೆಯುತ್ತಾರೆ.
Read this-Swamy Ayyappa ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ Top Devotional song
– ಈ ಸಮಯದಲ್ಲಿ ವ್ರತಧಾರಿಗಳು ಚಪ್ಪಲಿಯನ್ನು ಧರಿಸಬಾರದು ಹಾಗೂ ಕ್ಷೌರ ಇತ್ಯಾದಿಗಳನ್ನು ಮಾಡಬಾರದು.
– ದಿನಕ್ಕೆ 108 ಬಾರಿಯಾದರೂ ಅಯ್ಯಪ್ಪನ ಹೆಸರನ್ನು ಪಠಿಸಬೇಕು.
– ಮದ್ಯ ಮತ್ತು ತಂಬಾಕು ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
– ಮೆತ್ತನೆಯ ಹಾಸಿಗೆಯನ್ನು ಬಿಟ್ಟು ಖಾಲಿ ನೆಲದ ಮೇಲೆ ಅಥವಾ ಚಾಪೆಯ ಮೇಲೆ ಮಲಗಬೇಕು.
– ಭಕ್ತರು ವ್ರತದ ಅವಧಿಯಲ್ಲಿ ಬ್ರಹ್ಮಚರ್ಯವನ್ನು ಪಾಲಿಸಬೇಕು.
– ದಿನಕ್ಕೆ ಎರಡು ಬಾರಿ ಅಯ್ಯಪ್ಪನಿಗೆ ಪೂಜೆ ಕಡ್ಡಾಯ.
– ವ್ರತಧಾರಿಗಳು ತಮ್ಮ ಮಾತು ಮತ್ತು ಕಾರ್ಯದ ಮೇಲೆ ಹಿಡಿತವನ್ನಿಟ್ಟುಕೊಂಡಿರಬೇಕು.
– ವ್ರತಧಾರಿಗಳು ಈ ಸಮಯದಲ್ಲಿ ಯಾವುದೇ ರೀತಿಯಾದ ಅಂತ್ಯಕ್ರಿಯೆಯಂತಹ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಾರದು.
Read this-Harivaraasanam Vishwamohanam ಹರಿವರಾಸನಂ ವಿಶ್ವಮೋಹನಂ Top Devotional Songs
2. ಮಂಡಲಕಾಲ ವ್ರತದ ಮಹತ್ವವೇನು.?
– 41 ದಿನಗಳ ಅವಧಿಯ ಈ ವ್ರತವು ವ್ಯಕ್ತಿಯನ್ನು ಸ್ವಯಂ ಸಂಯಮವನ್ನು ಅಭ್ಯಾಸ ಮಾಡಲು ಮತ್ತು ಶಿಸ್ತುಬದ್ಧವಾಗಿರಲು ಸಹಾಯ ಮಾಡುತ್ತದೆ.
– ಭಕ್ತನ ಎಲ್ಲಾ ಇಷ್ಟಾರ್ಥಗಳು ಈಡೇರುವುದು.
– ವಯಸ್ಸು ಮತ್ತು ಲಿಂಗವನ್ನು ಲೆಕ್ಕಿಸದೆ ಯಾರಾದರೂ ಈ ಪೂಜೆಯನ್ನು ಮಾಡಬಹುದು. ಪೂಜೆಯು ಧಾರ್ಮಿಕವಾಗಿ ಪೂಜೆಯನ್ನು ಮಾಡುವ ಜನರ ಆತ್ಮ, ದೇಹ ಮತ್ತು ಮನಸ್ಸಿನ ಶುದ್ಧೀಕರಣವನ್ನು ಸೂಚಿಸುತ್ತದೆ.
3. ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದವರು ತುಳಸಿ ಮಾಲೆಯನ್ನೇಕೆ ಧರಿಸುತ್ತಾರೆ.?
– ಪ್ರಾಪಂಚಿಕ ಆಸೆಗಳನ್ನು ತ್ಯಜಿಸುವಿಕೆಯನ್ನು ಒತ್ತಿಹೇಳಲು ತೀರ್ಥಯಾತ್ರೆಯ ಸಿದ್ಧತೆಯಾಗಿ ತುಳಸಿ ಅಥವಾ ರುದ್ರಾಕ್ಷದ ಮಣಿಗಳ ಮಾಲೆಯನ್ನು ಧರಿಸುತ್ತಾರೆ.
– ಅಯ್ಯಪ್ಪ ಸ್ವಾಮಿ ಮಾಲೆ ಹಾಕುವುದರ ನಿಯಮಕ್ಕೆ ಅನುಸಾರವಾಗಿ ವ್ರತಧಾರಿಯು ಈ ತುಳಸಿ ಮಾಲೆಯನ್ನು ಗುರುಸ್ವಾಮಿಯಿಂದ ಪಡೆದುಕೊಳ್ಳುತ್ತಾನೆ.
– ಭಕ್ತನು ತನ್ನ ಕುತ್ತಿಗೆಗೆ ಪವಿತ್ರ ಮಾಲೆಯನ್ನು ಧರಿಸಿದಾಗ, ಅವನು ತನ್ನ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳನ್ನು ಶಕ್ತಿಯುತ ದೇವನಾದ ಸ್ವಾಮಿ ಅಯ್ಯಪ್ಪನಿಗೆ ಒಪ್ಪಿಸುತ್ತಾನೆ ಮತ್ತು ತಪಸ್ವಿಗಳ ಕಠಿಣ ಜೀವನವನ್ನು ನಡೆಸಲು ಪ್ರಾರಂಭಿಸುತ್ತಾನೆ.
Read this-The old man story for kids in kannada
ಈ ಮೇಲಿನ ನಿಯಮಗಳ ಪ್ರಕಾರ, ಅಯ್ಯಪ್ಪ ಸ್ವಾಮಿಯ ಭಕ್ತರು ಅಥವಾ ಮಾಲೆ ಧರಿಸುವವರು ಮಂಡಲ ಪೂಜೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. 41 ದಿನಗಳ ಕಠಿಣ ವ್ರತದ ನಂತರ ಅಯ್ಯಪ್ಪ ಸ್ವಾಮಿ ಸನ್ನಿಧಾನವಾದ ಶಬಿಮಲೆಗೆ ಭೇಟಿ ನೀಡಿ ಅಯ್ಯಪ್ಪನ ದರ್ಶನದೊಂದಿಗೆ ವ್ರತವನ್ನು ತ್ಯಜಿಸುತ್ತಾರೆ.
Support Us 


