ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
ಆದರೆ ಜನಪದ ವೈಭವದ ಕಾಲವೂ ಒಂದಿತ್ತು, ಆ ದಿನಗಳಲ್ಲಿ ಅದೇ ಒಂದು ಪಂಗಡ,ಧರ್ಮವಾಗಿ ಬೇಳೆದಿತ್ತು. ಕಲೆಯ ಕಾಲಿಗೆ ಬಿದ್ದು ಗೌರವಿಸುವ ಕಾಲ ಅದಾಗಿತ್ತು. ರಾಜಾದಿರಾಜರಿಂದ ಕಡು ಬಡವನವರೆಗೂ ಅದನ್ನು ಕಲಿಯುವ ತವಕ ಇತ್ತು ಹಾಗಾದರೆ ಅವೆಲ್ಲ ಯಾವುದಾಗಿತ್ತು ಮತ್ತು ಇಂದು ಬೀದಿ ದೋಂಬರಾಟ ವಾಗಲು ಕಾರಣವೇನು ? ಮುಂದೆ ಓದಿ
ದೊಡ್ಡಾಟ
ಹೌದು! ಇಂದು ಸುಣ್ಣದ ಗೋಡೆಯಂತೆ ಮಾಯ ವಾಗುತ್ತಿದೆ. ಒಂದು ಕಾಲದಲ್ಲಿ ಊರಿಗೆ ಊರೇ ಈ ದೊಡ್ಡಾಟಕ್ಕೆ ಕಾದು ಕುಳಿತು ಹಳೆ ಕಥೆಗಳ ಚಿತ್ರಣ ಕಂಡುಕೊಂಡ ವೈಭವ ಈ ಕಲೆಗಿತ್ತು.

ಈ ಆಟಕ್ಕೆ ಇನ್ನು ಹತ್ತಿಪ್ಪತ್ತು ದಿನ ಇರವಾಗಲೇ ಆಡುವ ಜಾಗವನ್ನು ಆಯ್ಕೆ ಮಾಡಿ ಅಲ್ಲಿ ‘ಹಂದರಗಂಬ’ವೊಂದನ್ನು ನಿಲ್ಲಿಸುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಹೊಂದುವ ಈ ಆಟ ರಾತ್ರಿಯೆಲ್ಲಾ ನಡೆದು ಸೂರ್ಯೋ ಉಯದ ವೇಳೆಗೆ ಮುಕ್ತಾಯವಾಗುತ್ತದೆ. ಹಾಗಾಗಿ ಸುರಕ್ಷಿತ ಜಾಗ ಮುಖ್ಯವಾಗುತ್ತದೆ .
ಜನಗಳನ್ನು ಸೆಳೆಯುವಂತ ಮಾತು ಚಾತುರ್ಯ, ಪಾತ್ರ ಹೋಲುವಂತ ಬಣ್ಣ ಮತ್ತು ಮಂಟಪ ಈ ದೊಡ್ಡಾಟಕ್ಕೆ ಬಲು ಮುಖ್ಯ ವಾಗುತ್ತದೆ.
ಈ ಆಟದಲ್ಲಿ ಕೃಷ್ಣ – ಅರ್ಜುನ ಒಳಗೊಂಡು ರಾಮ, ಲಕ್ಷ್ಮಣ, ಈಶ್ವರ , ಪಾರ್ವತಿ ಪಾತ್ರದಂತೆ ಕುರುಕ್ಷೇತ್ರ , ಕೃಷ್ಣಸಂಧಾನ, ಪುಷ್ಪಹರಣ,ವಿರಾಟ ಪರ್ವ, ಕರ್ಣಪರ್ವ, ಸುಧನ್ವಾರ್ಜನ ,ತಾರಕಾಸುರ ವಧೆ, ವೀರ ಅಭಿಮನ್ಯು, ಆಶ್ವಮೇಧಯಾಗದ್ದು, ವಾಲಿ-ಸುಗ್ರೀವರ ಕಾಳಗದ್ದು, ದ್ರೌಪದೀ ವಸ್ತ್ರಾಪ-ಹರಣ, ರತಿ-ಕಲ್ಯಾಣ, ಲವಕುಶರ ಕಾಳಗ, ತಾಮ್ರಧ್ವಜನ ಕಾಳಗ, ಅಹಿರಾವಣ, ರಾವಣ, ಶ್ವೇತ ಚರಿತ್ರೆ, ಭೀಮಾರ್ಜುನರ ಯುದ್ದ, ಕರ್ಣಾರ್ಜುನ ಕಾಳಗ, ಕಲಾವತಿ ಸ್ವಯಂವರ, ವೃತ್ತಪಾಲಕರಾಜ, ದುರ್ಗಾಸುರ ಕಾಳಗ, ಭೀಷ್ಮ – ಪರ್ವ, ಸುಭದ್ರಾಕಲ್ಯಾಣ, ಭಕ್ತ ಮಾರ್ಕಂಡೇಯರು, ಸತ್ಯ – ಹರಿಶ್ಚಂದ್ರ, ಇಂದ್ರಜಿತು ಕಾಳಗ, ಹಿಡಂಬಿ ಕಲ್ಯಾಣ, ಊರ್ವಶಿ, ರಾಮಾಂಜನೇಯ ಯುದ್ದ , ಲಂಕಾದಹನ, ಜಲಂಧರನ ಕಾಳಗ, ಸಾನಂದ ಗಣೇಶ ಹೀಗೆ ಅನೇಕ ಪಾತ್ರ ಪರಿಚಯ ತಿಳಿಸಿಕೊಟ್ಟ ಸಿಂಹ ಪಾಲು ಈ ದೊಡ್ಡಾಟದ್ದು.
ಕಾಲ ಬದಲಾಗುತ್ತಿದೆ, ಬಣ ಮಾಸುತ್ತಿದೆ, ಪೀಳಿಗೆ ಬದಲಾಗಿ ಆಸಕ್ತಿ ಬೇರೆಡೆಗೆ ವಾಲುತ್ತಾ ಇಂತಹ ಕಲೆಗಳನ್ನು ಕಾಣುವುದು ಕಷ್ಟ.
ಆದರು ಇದನ್ನು ಆರಾಧ್ಯ ದೈವದಂತೆ ಪೂಜಿಸುತ್ತಾ, ಪೂರ್ವಜರ ಕಲೆಯನ್ನು ಪರಗತ ಮಾಡಿಕೊಂಡ ಪಂಗಡ ನಮ್ಮಲ್ಲೀ ಈಗಲೂ ಸಿಗುತ್ತಾರೆ ಆದರೆ ಅವರ ಸತ್ಕಾರ ತುಂಬಾ ಕಡಿಮೆ .. ಕಲೆಗಳನ್ನು ಬೆಳೆಸಿ
ಮುಂದೆ ಯಕ್ಷಗಾನ ತಿಳಿಯೋಣ…..
- ಚಂದ್ರಗ್ರಹಣದ ಸಮಯದಲ್ಲಿ ಏಕೆ ಚಂದ್ರನನ್ನು ರಕ್ತ ಚಂದ್ರ ಎಂದು ಕರೆಯುತ್ತಾರೆ? – Blood Moonಚಂದ್ರಗ್ರಹಣದ ಸಮಯದಲ್ಲಿ ಏಕೆ ಚಂದ್ರನನ್ನು ರಕ್ತ ಚಂದ್ರ ಎಂದು ಕರೆಯುತ್ತಾರೆ? – Blood Moon ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿರುವ ಆಕಾಶ ವೀಕ್ಷಕರು ಸೆಪ್ಟೆಂಬರ್ 7 ರಂದು ಸಂಪೂರ್ಣ ಚಂದ್ರಗ್ರಹಣದ ಸಮಯದಲ್ಲಿ ರಕ್ತಸಿಕ್ತ ಚಂದ್ರನನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಚಂದ್ರನು ಗಾಢ ಕೆಂಪು-ತಾಮ್ರದ ಬಣ್ಣವನ್ನು ಪಡೆಯುತ್ತಾನೆ. ಇದು… Read more: ಚಂದ್ರಗ್ರಹಣದ ಸಮಯದಲ್ಲಿ ಏಕೆ ಚಂದ್ರನನ್ನು ರಕ್ತ ಚಂದ್ರ ಎಂದು ಕರೆಯುತ್ತಾರೆ? – Blood Moon
- Garena Free Fire Max Redeem Codes – ಗರೆನಾ ಉಚಿತ ಫೈರ್ ಮ್ಯಾಕ್ಸ್ ರಿಡೀಮ್ ಕೋಡ್ಗಳುGarena Free Fire Max Redeem Codes – ಗರೆನಾ ಉಚಿತ ಫೈರ್ ಮ್ಯಾಕ್ಸ್ ರಿಡೀಮ್ ಕೋಡ್ಗಳು ಜನಪ್ರಿಯ ಬ್ಯಾಟಲ್ ರಾಯಲ್ ಆಟವಾದ ಗರೆನಾ ಫ್ರೀ ಫೈರ್ ಮ್ಯಾಕ್ಸ್, ಆಟಗಾರರನ್ನು ಆಗಾಗ್ಗೆ ಪಂದ್ಯಾವಳಿಗಳು, ಈವೆಂಟ್ಗಳು ಮತ್ತು ದೈನಂದಿನ ಬಹುಮಾನಗಳೊಂದಿಗೆ ಆಕರ್ಷಿಸುತ್ತದೆ. ಆಟದಲ್ಲಿನ ಉಚಿತ ಉಡುಗೊರೆಗಳನ್ನು ಪಡೆದುಕೊಳ್ಳಲು ಸುಲಭವಾದ… Read more: Garena Free Fire Max Redeem Codes – ಗರೆನಾ ಉಚಿತ ಫೈರ್ ಮ್ಯಾಕ್ಸ್ ರಿಡೀಮ್ ಕೋಡ್ಗಳು
- Gold rate today – ಇಂದಿನ ಚಿನ್ನದ ದರGold rate today – ಇಂದಿನ ಚಿನ್ನದ ದರ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 900 ರೂ.ಗಳಷ್ಟು ಏರಿಕೆಯಾಗಿ 1,06,970 ರೂ.ಗಳಿಗೆ ತಲುಪಿದ್ದು, ರೂಪಾಯಿ ದೌರ್ಬಲ್ಯ, ದೃಢವಾದ ಜಾಗತಿಕ ಪ್ರವೃತ್ತಿಗಳು ಮತ್ತು ಈ ತಿಂಗಳ ಕೊನೆಯಲ್ಲಿ ಯುಎಸ್ ಫೆಡರಲ್ ರಿಸರ್ವ್ ದರ ಕಡಿತದ… Read more: Gold rate today – ಇಂದಿನ ಚಿನ್ನದ ದರ
- Maruti Victoris Price Expectations – ಮಾರುತಿ ವಿಕ್ಟೋರಿಸ್ ಬೆಲೆ ನಿರೀಕ್ಷೆಗಳುMaruti Victoris Price Expectations – ಮಾರುತಿ ವಿಕ್ಟೋರಿಸ್ ಬೆಲೆ ನಿರೀಕ್ಷೆಗಳು ಇತ್ತೀಚೆಗೆ ನಾವು ಮಾರುತಿಯಿಂದ ‘ವಿಕ್ಟೋರಿಸ್’ ಎಂಬ ಹೊಸ ಕಾಂಪ್ಯಾಕ್ಟ್ ಎಸ್ಯುವಿಯನ್ನು ನೋಡಿದ್ದೇವೆ. ಹೊಸ ಮಾರುತಿ ಎಸ್ಯುವಿಗೆ ಸಂಬಂಧಿಸಿದ ಎಲ್ಲಾ ವಿವರಗಳು, ಅದರ ರೂಪಾಂತರ ಶ್ರೇಣಿ, ಎಂಜಿನ್ ಆಯ್ಕೆಗಳು ಮತ್ತು ವೈಶಿಷ್ಟ್ಯಗಳನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ. ಇದರ… Read more: Maruti Victoris Price Expectations – ಮಾರುತಿ ವಿಕ್ಟೋರಿಸ್ ಬೆಲೆ ನಿರೀಕ್ಷೆಗಳು
- Why Do We Celebrate Teachers’ Day On Sept 5? – ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ನಾವು ಏಕೆ ಆಚರಿಸುತ್ತೇವೆ?Why Do We Celebrate Teachers’ Day On Sept 5? – ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ನಾವು ಏಕೆ ಆಚರಿಸುತ್ತೇವೆ? ಶಿಕ್ಷಕರ ದಿನ 2025: ಈ ದಿನಾಂಕವು ಭಾರತದ ಎರಡನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಪ್ರಖ್ಯಾತ ತತ್ವಜ್ಞಾನಿ, ವಿದ್ವಾಂಸ ಮತ್ತು ರಾಜಕಾರಣಿ ಡಾ.… Read more: Why Do We Celebrate Teachers’ Day On Sept 5? – ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ನಾವು ಏಕೆ ಆಚರಿಸುತ್ತೇವೆ?