ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
ಆದರೆ ಜನಪದ ವೈಭವದ ಕಾಲವೂ ಒಂದಿತ್ತು, ಆ ದಿನಗಳಲ್ಲಿ ಅದೇ ಒಂದು ಪಂಗಡ,ಧರ್ಮವಾಗಿ ಬೇಳೆದಿತ್ತು. ಕಲೆಯ ಕಾಲಿಗೆ ಬಿದ್ದು ಗೌರವಿಸುವ ಕಾಲ ಅದಾಗಿತ್ತು. ರಾಜಾದಿರಾಜರಿಂದ ಕಡು ಬಡವನವರೆಗೂ ಅದನ್ನು ಕಲಿಯುವ ತವಕ ಇತ್ತು ಹಾಗಾದರೆ ಅವೆಲ್ಲ ಯಾವುದಾಗಿತ್ತು ಮತ್ತು ಇಂದು ಬೀದಿ ದೋಂಬರಾಟ ವಾಗಲು ಕಾರಣವೇನು ? ಮುಂದೆ ಓದಿ
ದೊಡ್ಡಾಟ
ಹೌದು! ಇಂದು ಸುಣ್ಣದ ಗೋಡೆಯಂತೆ ಮಾಯ ವಾಗುತ್ತಿದೆ. ಒಂದು ಕಾಲದಲ್ಲಿ ಊರಿಗೆ ಊರೇ ಈ ದೊಡ್ಡಾಟಕ್ಕೆ ಕಾದು ಕುಳಿತು ಹಳೆ ಕಥೆಗಳ ಚಿತ್ರಣ ಕಂಡುಕೊಂಡ ವೈಭವ ಈ ಕಲೆಗಿತ್ತು.

ಈ ಆಟಕ್ಕೆ ಇನ್ನು ಹತ್ತಿಪ್ಪತ್ತು ದಿನ ಇರವಾಗಲೇ ಆಡುವ ಜಾಗವನ್ನು ಆಯ್ಕೆ ಮಾಡಿ ಅಲ್ಲಿ ‘ಹಂದರಗಂಬ’ವೊಂದನ್ನು ನಿಲ್ಲಿಸುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಹೊಂದುವ ಈ ಆಟ ರಾತ್ರಿಯೆಲ್ಲಾ ನಡೆದು ಸೂರ್ಯೋ ಉಯದ ವೇಳೆಗೆ ಮುಕ್ತಾಯವಾಗುತ್ತದೆ. ಹಾಗಾಗಿ ಸುರಕ್ಷಿತ ಜಾಗ ಮುಖ್ಯವಾಗುತ್ತದೆ .
ಜನಗಳನ್ನು ಸೆಳೆಯುವಂತ ಮಾತು ಚಾತುರ್ಯ, ಪಾತ್ರ ಹೋಲುವಂತ ಬಣ್ಣ ಮತ್ತು ಮಂಟಪ ಈ ದೊಡ್ಡಾಟಕ್ಕೆ ಬಲು ಮುಖ್ಯ ವಾಗುತ್ತದೆ.
ಈ ಆಟದಲ್ಲಿ ಕೃಷ್ಣ – ಅರ್ಜುನ ಒಳಗೊಂಡು ರಾಮ, ಲಕ್ಷ್ಮಣ, ಈಶ್ವರ , ಪಾರ್ವತಿ ಪಾತ್ರದಂತೆ ಕುರುಕ್ಷೇತ್ರ , ಕೃಷ್ಣಸಂಧಾನ, ಪುಷ್ಪಹರಣ,ವಿರಾಟ ಪರ್ವ, ಕರ್ಣಪರ್ವ, ಸುಧನ್ವಾರ್ಜನ ,ತಾರಕಾಸುರ ವಧೆ, ವೀರ ಅಭಿಮನ್ಯು, ಆಶ್ವಮೇಧಯಾಗದ್ದು, ವಾಲಿ-ಸುಗ್ರೀವರ ಕಾಳಗದ್ದು, ದ್ರೌಪದೀ ವಸ್ತ್ರಾಪ-ಹರಣ, ರತಿ-ಕಲ್ಯಾಣ, ಲವಕುಶರ ಕಾಳಗ, ತಾಮ್ರಧ್ವಜನ ಕಾಳಗ, ಅಹಿರಾವಣ, ರಾವಣ, ಶ್ವೇತ ಚರಿತ್ರೆ, ಭೀಮಾರ್ಜುನರ ಯುದ್ದ, ಕರ್ಣಾರ್ಜುನ ಕಾಳಗ, ಕಲಾವತಿ ಸ್ವಯಂವರ, ವೃತ್ತಪಾಲಕರಾಜ, ದುರ್ಗಾಸುರ ಕಾಳಗ, ಭೀಷ್ಮ – ಪರ್ವ, ಸುಭದ್ರಾಕಲ್ಯಾಣ, ಭಕ್ತ ಮಾರ್ಕಂಡೇಯರು, ಸತ್ಯ – ಹರಿಶ್ಚಂದ್ರ, ಇಂದ್ರಜಿತು ಕಾಳಗ, ಹಿಡಂಬಿ ಕಲ್ಯಾಣ, ಊರ್ವಶಿ, ರಾಮಾಂಜನೇಯ ಯುದ್ದ , ಲಂಕಾದಹನ, ಜಲಂಧರನ ಕಾಳಗ, ಸಾನಂದ ಗಣೇಶ ಹೀಗೆ ಅನೇಕ ಪಾತ್ರ ಪರಿಚಯ ತಿಳಿಸಿಕೊಟ್ಟ ಸಿಂಹ ಪಾಲು ಈ ದೊಡ್ಡಾಟದ್ದು.
ಕಾಲ ಬದಲಾಗುತ್ತಿದೆ, ಬಣ ಮಾಸುತ್ತಿದೆ, ಪೀಳಿಗೆ ಬದಲಾಗಿ ಆಸಕ್ತಿ ಬೇರೆಡೆಗೆ ವಾಲುತ್ತಾ ಇಂತಹ ಕಲೆಗಳನ್ನು ಕಾಣುವುದು ಕಷ್ಟ.
ಆದರು ಇದನ್ನು ಆರಾಧ್ಯ ದೈವದಂತೆ ಪೂಜಿಸುತ್ತಾ, ಪೂರ್ವಜರ ಕಲೆಯನ್ನು ಪರಗತ ಮಾಡಿಕೊಂಡ ಪಂಗಡ ನಮ್ಮಲ್ಲೀ ಈಗಲೂ ಸಿಗುತ್ತಾರೆ ಆದರೆ ಅವರ ಸತ್ಕಾರ ತುಂಬಾ ಕಡಿಮೆ .. ಕಲೆಗಳನ್ನು ಬೆಳೆಸಿ
ಮುಂದೆ ಯಕ್ಷಗಾನ ತಿಳಿಯೋಣ…..
- ನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆSpread the loveನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆ ಬೇಕಾಗುವ ಪದಾರ್ಥಗಳು… ನುಗ್ಗೆಕಾಯಿ- 4 ಕೊಬ್ಬರಿ- ಸ್ವಲ್ಪ ಕಡಲೆಕಾಯಿ ಬೀಜ- 1 ಸಣ್ಣ ಬಟ್ಟಲು ಬಿಳಿ ಎಳ್ಳು- 1 ಚಮಚ ಸಾಸಿವೆ- ಸ್ವಲ್ಪ ಜೀರಿಗೆ-ಸ್ವಲ್ಪ ಕರಿಬೇವು-ಸ್ವಲ್ಪ ಹಸಿಮೆಣಸಿನ ಕಾಯಿ – 2 (ಸಣ್ಣಗೆ ಹೆಚ್ಚಿದ್ದು) ಈರುಳ್ಳಿ- 2 (ಉದ್ದುದ್ದಕ್ಕೆ… Read more: ನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆ
- ಹೇಗೆ ಬೇಯಿಸುವುದು ಎಗ್-ಪೊಟ್ಯಾಟೊ ಕಟ್ಲೆಟ್Spread the loveಹೇಗೆ ಬೇಯಿಸುವುದು ಎಗ್-ಪೊಟ್ಯಾಟೊ ಕಟ್ಲೆಟ್ ಬೇಕಾಗುವ ಪದಾರ್ಥಗಳು… ಅಲೂಗಡ್ಡೆ- 4 ಮೊಟ್ಟೆ-3 ಅಚ್ಚ ಖಾರದ ಪುಡಿ- 1 ಚಮಚ ದನಿಯಾ ಪುಡಿ- ಅರ್ಧ ಚಮಚ ಅರಿಶಿನದ ಪುಡಿ- ಸ್ವಲ್ಪ ಉಪ್ಪು- ರುಚಿಗೆ ತಕ್ಕಷ್ಟು ಮ್ಯಾಗಿ ಮಸಾಲೆ ಪುಡಿ- ಅರ್ಧ ಚಮಚ ಕೊತ್ತಂಬರಿ ಸೊಪ್ಪು-ಸ್ವಲ್ಪ (ಸಣ್ಣಗೆ… Read more: ಹೇಗೆ ಬೇಯಿಸುವುದು ಎಗ್-ಪೊಟ್ಯಾಟೊ ಕಟ್ಲೆಟ್
- ಬ್ರೆಡ್ ರೋಲ್ಗಳನ್ನು ಬೇಯಿಸುವುದು ಹೇಗೆSpread the loveಬ್ರೆಡ್ ರೋಲ್ಗಳನ್ನು ಬೇಯಿಸುವುದು ಹೇಗೆ ಬೇಕಾಗುವ ಪದಾರ್ಥಗಳು… ಆಲೂಗಡ್ಡೆ- 2 ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು) ಹಸಿ ಮೆಣಸಿನ ಕಾಯಿ- 2 ಉಪ್ಪು-ರುಚಿಗೆ ತಕ್ಕಷ್ಟು ಖಾರದ ಪುಡಿ- ಸ್ವಲ್ಪ ಜೀರಿಗೆ ಪುಡಿ-ಸ್ವಲ್ಪ ಚಾಟ್ ಮಸಾಲೆ ಪುಡಿ- ಸ್ವಲ್ಪ ಬ್ರೆಡ್ ಸ್ಲೈಸ್- 5-6 ಮೈದಾ ಹಿಟ್ಟು-… Read more: ಬ್ರೆಡ್ ರೋಲ್ಗಳನ್ನು ಬೇಯಿಸುವುದು ಹೇಗೆ
- ಮನೆದಲ್ಲೇ ಜ್ವರಕ್ಕೆ ಹೆಚ್ಚು ಏನು ಮಾಡಬಹುದು:Spread the loveಮನೆದಲ್ಲೇ ಜ್ವರಕ್ಕೆ ಹೆಚ್ಚು ಏನು ಮಾಡಬಹುದು: ✅ ಶೀತ ಸರಪಳಿ (cold compress): ಗಾಳಿಗುಡಿಯುವ ತೊಟ್ಟಿಲಿನಲ್ಲಿ ಅಥವಾ ಫ್ಯಾನಿನ ಕೆಳಗೆ ತಂಪಾದ ನೀರಿನ ಟವಲ್ ಮುಚ್ಚಿಕೊಂಡು ಬಿಸಿ ತಗ್ಗಿಸಬಹುದು. ✅ ತಣ್ಣನೆಯ/ಹಗುರ ಆಹಾರ: ಸಜ್ಜೆ ಗಂಜಿ, ಅಕ್ಕಿ ಅನ್ನ, ಹಸಿವಿದ್ರೆ ಹಸಿವಿನಂತೆ ಹಳದಿ ಬಣ್ಣದ… Read more: ಮನೆದಲ್ಲೇ ಜ್ವರಕ್ಕೆ ಹೆಚ್ಚು ಏನು ಮಾಡಬಹುದು:
- ಖಜ್ಜಿಯಾರ್- ಭಾರತದಲ್ಲಿ ಭೇಟಿ ನೀಡಬೇಕಾದ ಸ್ಥಳಗಳುSpread the loveಖಜ್ಜಿಯಾರ್- ಭಾರತದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು ಖಜ್ಜಿಯಾರ್ ಹಿಮಾಚಲ ಪ್ರದೇಶದ ಒಂದು ಸಣ್ಣ ಬೆಟ್ಟದ ಪಟ್ಟಣವಾಗಿದ್ದು, ಇದು ಸಮೃದ್ಧವಾದ ರಮಣೀಯ ಸೌಂದರ್ಯದಿಂದ ಆಶೀರ್ವದಿಸಲ್ಪಟ್ಟಿದೆ. 6,500 ಅಡಿ ಎತ್ತರದಲ್ಲಿರುವ ಈ ಸ್ಥಳವು ವಿಶಾಲವಾದ ದಟ್ಟವಾದ ಕಾಡುಗಳು, ಸರೋವರಗಳು ಮತ್ತು ವಿಶಾಲವಾದ ಹುಲ್ಲುಗಾವಲು ಪ್ರದೇಶಗಳನ್ನು ಒಳಗೊಂಡಿದೆ. ಚಂಬಾ… Read more: ಖಜ್ಜಿಯಾರ್- ಭಾರತದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು