ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
ಆದರೆ ಜನಪದ ವೈಭವದ ಕಾಲವೂ ಒಂದಿತ್ತು, ಆ ದಿನಗಳಲ್ಲಿ ಅದೇ ಒಂದು ಪಂಗಡ,ಧರ್ಮವಾಗಿ ಬೇಳೆದಿತ್ತು. ಕಲೆಯ ಕಾಲಿಗೆ ಬಿದ್ದು ಗೌರವಿಸುವ ಕಾಲ ಅದಾಗಿತ್ತು. ರಾಜಾದಿರಾಜರಿಂದ ಕಡು ಬಡವನವರೆಗೂ ಅದನ್ನು ಕಲಿಯುವ ತವಕ ಇತ್ತು ಹಾಗಾದರೆ ಅವೆಲ್ಲ ಯಾವುದಾಗಿತ್ತು ಮತ್ತು ಇಂದು ಬೀದಿ ದೋಂಬರಾಟ ವಾಗಲು ಕಾರಣವೇನು ? ಮುಂದೆ ಓದಿ
ದೊಡ್ಡಾಟ
ಹೌದು! ಇಂದು ಸುಣ್ಣದ ಗೋಡೆಯಂತೆ ಮಾಯ ವಾಗುತ್ತಿದೆ. ಒಂದು ಕಾಲದಲ್ಲಿ ಊರಿಗೆ ಊರೇ ಈ ದೊಡ್ಡಾಟಕ್ಕೆ ಕಾದು ಕುಳಿತು ಹಳೆ ಕಥೆಗಳ ಚಿತ್ರಣ ಕಂಡುಕೊಂಡ ವೈಭವ ಈ ಕಲೆಗಿತ್ತು.

ಈ ಆಟಕ್ಕೆ ಇನ್ನು ಹತ್ತಿಪ್ಪತ್ತು ದಿನ ಇರವಾಗಲೇ ಆಡುವ ಜಾಗವನ್ನು ಆಯ್ಕೆ ಮಾಡಿ ಅಲ್ಲಿ ‘ಹಂದರಗಂಬ’ವೊಂದನ್ನು ನಿಲ್ಲಿಸುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಹೊಂದುವ ಈ ಆಟ ರಾತ್ರಿಯೆಲ್ಲಾ ನಡೆದು ಸೂರ್ಯೋ ಉಯದ ವೇಳೆಗೆ ಮುಕ್ತಾಯವಾಗುತ್ತದೆ. ಹಾಗಾಗಿ ಸುರಕ್ಷಿತ ಜಾಗ ಮುಖ್ಯವಾಗುತ್ತದೆ .
ಜನಗಳನ್ನು ಸೆಳೆಯುವಂತ ಮಾತು ಚಾತುರ್ಯ, ಪಾತ್ರ ಹೋಲುವಂತ ಬಣ್ಣ ಮತ್ತು ಮಂಟಪ ಈ ದೊಡ್ಡಾಟಕ್ಕೆ ಬಲು ಮುಖ್ಯ ವಾಗುತ್ತದೆ.
ಈ ಆಟದಲ್ಲಿ ಕೃಷ್ಣ – ಅರ್ಜುನ ಒಳಗೊಂಡು ರಾಮ, ಲಕ್ಷ್ಮಣ, ಈಶ್ವರ , ಪಾರ್ವತಿ ಪಾತ್ರದಂತೆ ಕುರುಕ್ಷೇತ್ರ , ಕೃಷ್ಣಸಂಧಾನ, ಪುಷ್ಪಹರಣ,ವಿರಾಟ ಪರ್ವ, ಕರ್ಣಪರ್ವ, ಸುಧನ್ವಾರ್ಜನ ,ತಾರಕಾಸುರ ವಧೆ, ವೀರ ಅಭಿಮನ್ಯು, ಆಶ್ವಮೇಧಯಾಗದ್ದು, ವಾಲಿ-ಸುಗ್ರೀವರ ಕಾಳಗದ್ದು, ದ್ರೌಪದೀ ವಸ್ತ್ರಾಪ-ಹರಣ, ರತಿ-ಕಲ್ಯಾಣ, ಲವಕುಶರ ಕಾಳಗ, ತಾಮ್ರಧ್ವಜನ ಕಾಳಗ, ಅಹಿರಾವಣ, ರಾವಣ, ಶ್ವೇತ ಚರಿತ್ರೆ, ಭೀಮಾರ್ಜುನರ ಯುದ್ದ, ಕರ್ಣಾರ್ಜುನ ಕಾಳಗ, ಕಲಾವತಿ ಸ್ವಯಂವರ, ವೃತ್ತಪಾಲಕರಾಜ, ದುರ್ಗಾಸುರ ಕಾಳಗ, ಭೀಷ್ಮ – ಪರ್ವ, ಸುಭದ್ರಾಕಲ್ಯಾಣ, ಭಕ್ತ ಮಾರ್ಕಂಡೇಯರು, ಸತ್ಯ – ಹರಿಶ್ಚಂದ್ರ, ಇಂದ್ರಜಿತು ಕಾಳಗ, ಹಿಡಂಬಿ ಕಲ್ಯಾಣ, ಊರ್ವಶಿ, ರಾಮಾಂಜನೇಯ ಯುದ್ದ , ಲಂಕಾದಹನ, ಜಲಂಧರನ ಕಾಳಗ, ಸಾನಂದ ಗಣೇಶ ಹೀಗೆ ಅನೇಕ ಪಾತ್ರ ಪರಿಚಯ ತಿಳಿಸಿಕೊಟ್ಟ ಸಿಂಹ ಪಾಲು ಈ ದೊಡ್ಡಾಟದ್ದು.
ಕಾಲ ಬದಲಾಗುತ್ತಿದೆ, ಬಣ ಮಾಸುತ್ತಿದೆ, ಪೀಳಿಗೆ ಬದಲಾಗಿ ಆಸಕ್ತಿ ಬೇರೆಡೆಗೆ ವಾಲುತ್ತಾ ಇಂತಹ ಕಲೆಗಳನ್ನು ಕಾಣುವುದು ಕಷ್ಟ.
ಆದರು ಇದನ್ನು ಆರಾಧ್ಯ ದೈವದಂತೆ ಪೂಜಿಸುತ್ತಾ, ಪೂರ್ವಜರ ಕಲೆಯನ್ನು ಪರಗತ ಮಾಡಿಕೊಂಡ ಪಂಗಡ ನಮ್ಮಲ್ಲೀ ಈಗಲೂ ಸಿಗುತ್ತಾರೆ ಆದರೆ ಅವರ ಸತ್ಕಾರ ತುಂಬಾ ಕಡಿಮೆ .. ಕಲೆಗಳನ್ನು ಬೆಳೆಸಿ
ಮುಂದೆ ಯಕ್ಷಗಾನ ತಿಳಿಯೋಣ…..
- ನುಗ್ಗೆಕಾಯಿ ತಿನ್ನುವುದರಿಂದ ಗಂಡಸರಿಗೆ ಯಾವ ಲಾಭ? ಆರೋಗ್ಯದ ಸಂಪೂರ್ಣ ಮಾಹಿತಿ!Spread the love ನುಗ್ಗೆಕಾಯಿ ತಿನ್ನುವುದರಿಂದ ಗಂಡಸರಿಗೆ ಯಾವ ಲಾಭ? ಆರೋಗ್ಯದ ಸಂಪೂರ್ಣ ಮಾಹಿತಿ! ನುಗ್ಗೆಕಾಯಿ (Drumstick) ತಿನ್ನುವುದರಿಂದ ಗಂಡಸರಿಗೆ ಹಲವಾರು ಆರೋಗ್ಯ ಲಾಭಗಳಿವೆ. ಅದರಲ್ಲೂ, ಇದು ಶಾರೀರಿಕ ಮತ್ತು ಕಾಮಶಕ್ತಿಯನ್ನು ಹೆಚ್ಚಿಸುವುದಕ್ಕೆ ಸಹಕಾರಿಯಾಗಿದೆ. ನುಗ್ಗೆಕಾಯಿ ಸೇವನೆಯಿಂದ ಗಂಡಸರಿಗೆ ಬೀರುವ ಪ್ರಮುಖ ಪ್ರಯೋಜನಗಳು ಹೀಗಿವೆ: 1. ಪುರುಷ ಶಕ್ತಿ… Read more: ನುಗ್ಗೆಕಾಯಿ ತಿನ್ನುವುದರಿಂದ ಗಂಡಸರಿಗೆ ಯಾವ ಲಾಭ? ಆರೋಗ್ಯದ ಸಂಪೂರ್ಣ ಮಾಹಿತಿ!
- ಬೆಳಗ್ಗೆ ಎದ್ದ ತಕ್ಷಣ ‘ಕರಾಗ್ರೇ ವಸತೇ ಲಕ್ಷ್ಮೀ’ ಶ್ಲೋಕ ಹೇಳುವುದರಿಂದ ಆರೋಗ್ಯಕ್ಕೂ ಲಾಭವಿದೆಯಾ?Spread the love ಬೆಳಗ್ಗೆ ಎದ್ದ ತಕ್ಷಣ ‘ಕರಾಗ್ರೇ ವಸತೇ ಲಕ್ಷ್ಮೀ’ ಶ್ಲೋಕ ಹೇಳುವುದರಿಂದ ಆರೋಗ್ಯಕ್ಕೂ ಲಾಭವಿದೆಯಾ? ಶ್ಲೋಕ: ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ || ಕರಾಗ್ರೇ ಕೈಯ ತುದಿಯಲ್ಲಿ (ಬೆರಳುಗಳ ತುದಿಯಲ್ಲಿ) ವಸತೇ ಲಕ್ಷ್ಮೀ: ಲಕ್ಷ್ಮಿಯು ನೆಲೆಸಿದ್ದಾಳೆ… Read more: ಬೆಳಗ್ಗೆ ಎದ್ದ ತಕ್ಷಣ ‘ಕರಾಗ್ರೇ ವಸತೇ ಲಕ್ಷ್ಮೀ’ ಶ್ಲೋಕ ಹೇಳುವುದರಿಂದ ಆರೋಗ್ಯಕ್ಕೂ ಲಾಭವಿದೆಯಾ?
- Uses of water in Kannada 10 uses of waterSpread the love ನೀರಿನ ಮಹತ್ವವನ್ನು ನೀರಿನ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಬೇಕು, ಏಕೆಂದರೆ ಇದು ಮಾನವ ದೇಹಕ್ಕೆ ಅನಿವಾರ್ಯವಾದ ಅಂಶ. ನೀರಿನ ಉಪಯೋಗಗಳು ಹೀಗಿವೆ: 1. ಶರೀರದ ಹೈಡ್ರೇಶನ್ (Hydration) ನೀರು ದೇಹವನ್ನು ತೇವವಾಗಿರಿಸಿ, ಉಜ್ಜಿವನಯುತವಾಗಿ ಇರಿಸುತ್ತದೆ. 2. ಜೀರ್ಣಕ್ರಿಯೆಗೆ ಸಹಾಯ (Digestion Support) ನೀರು… Read more: Uses of water in Kannada 10 uses of water
- Important points of health in kannadaSpread the love ಆರೋಗ್ಯ (Aarogya) – Health ಆರೋಗ್ಯ ಎಂದರೆ ಕೇವಲ ರೋಗರಹಿತ ಸ್ಥಿತಿಯನ್ನಷ್ಟೇ ಸೂಚಿಸುವುದಲ್ಲ, ಅದು ದೈಹಿಕ (Physical), ಮಾನಸಿಕ (Mental) ಮತ್ತು ಸಾಮಾಜಿಕ (Social) ಕ್ಷೇಮವನ್ನು ಒಳಗೊಂಡಿರುತ್ತದೆ. ಸಂಪೂರ್ಣ ಆರೋಗ್ಯವು ಒಬ್ಬ ವ್ಯಕ್ತಿಯ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ ಮತ್ತು ಅವನ ದಿನನಿತ್ಯದ ಕ್ರಿಯಾಕಲಾಪಗಳಲ್ಲಿ… Read more: Important points of health in kannada
- Ayurveda – Ayurveda in kannadaSpread the love ಆಯುರ್ವೇದ (Ayurveda) – Ayurveda ಆಯುರ್ವೇದ (Ayurveda) ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾಗಿದ್ದು, ಇದು ಸುಮಾರು 5000 ವರ್ಷಗಳ ಇತಿಹಾಸ ಹೊಂದಿದೆ. ಸಂಸ್ಕೃತದಲ್ಲಿ “ಆಯುರ್ವೇದ” ಎಂಬ ಪದ “ಆಯುಃ” (ಆಯುಷ್ಯ, ಜೀವನ) ಮತ್ತು “ವೇದ” (ಜ್ಞಾನ, ವಿಜ್ಞಾನ) ಎಂಬ ಎರಡು ಪದಗಳಿಂದ ಆಗಿರುತ್ತದೆ,… Read more: Ayurveda – Ayurveda in kannada