Vijay stands in the way of the Mekedatu project
ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಇದೀಗ ತಮಿಳುನಾಡು ನೂತನ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಸಹ ಅಡ್ಡಗಾಲು ಹಾಕುತ್ತಿದ್ದು, ಸೋಮವಾರ ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಸ್ತಾವನೆಯ ಕುರಿತು ಪರಿಶೀಲನಾ ಸಭೆ ನಡೆಸಿದರು.ಮೇಕೆದಾಟು ಯೋಜನೆಗೆ ತಮಿಳುನಾಡು ಮೊದಲಿನಿಂದಲೂ ವಿರೋಧಿಸುತ್ತಿದ್ದು, ಇದೀಗ ಹೊಸದಾಗಿ ಅಧಿಕಾರಕ್ಕೆ ಬಂದ ಟಿವಿಕೆ ಸರ್ಕಾರ ಸಹ ಅದೇ ನಿಲುವು ತಳೆದಿದೆ.
ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವುದಕ್ಕೆ ಉದ್ದೇಶಿತ “ಭೂಮಿ ಪೂಜೆ” ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.”ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸಲು ಮತ್ತು ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ವಿವರವಾದ ಪರಿಶೀಲನಾ ಸಭೆ ನಡೆಸಲಾಯಿತು” ಎಂದು ಪ್ರಕಟಣೆ ಹೇಳಿದೆ.ಈ ವಿಷಯಕ್ಕೆ ಸಂಬಂಧಿಸಿದ ಪ್ರಕರಣಗಳ ಕುರಿತು ಚರ್ಚಿಸಲಾಯಿತು, ಸುಪ್ರೀಂ ಕೋರ್ಟ್ ಕೊನೆಯದಾಗಿ ಕೇಂದ್ರ ತಜ್ಞರು ಮಾತ್ರ ನಿರ್ಧರಿಸಬಹುದು ಎಂಬ ಹಿಂದಿನ ತೀರ್ಪಿನ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿತ್ತು.
Read this – RCB vs SRH; ಎಸ್ರ್ಎಚ್ ವಿರುದ್ಧ ಸೋತರೂ ಆರ್ಸಿಬಿ ಕ್ವಾಲಿಫೈಯರ್ 1ಕ್ಕೆ ಪ್ರವೇಶಿಸಿದ್ದೇ ರೋಚಕ
#WATCH | Chennai | Tamil Nadu CM C Joseph Vijay chairs a meeting with Cauvery water experts and legal experts regarding the proposed Bhoomi Pooja by the Karnataka Government in connection with the construction of the Mekedatu dam across the Cauvery River, and instructed that… pic.twitter.com/dHxogECzeY
— ANI (@ANI) May 25, 2026
“ಮೇಲೆ ತಿಳಿಸಿದ ನ್ಯಾಯಾಲಯದ ತೀರ್ಪನ್ನು ಗಮನದಲ್ಲಿಟ್ಟುಕೊಂಡು ವಿವರವಾದ ಸಮಾಲೋಚನೆಗಳ ನಂತರ ಕಾನೂನು ಕ್ರಮಗಳನ್ನು ತ್ವರಿತಗೊಳಿಸುವಂತೆ ಮುಖ್ಯಮಂತ್ರಿ ವಿಜಯ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಸಭೆಯಲ್ಲಿ ಸಂಪುಟ ಸಚಿವರಾದ ಎನ್ ಆನಂದ್, ಅಧವ್ ಅರ್ಜುನ ಮತ್ತು ಆರ್ ನಿರ್ಮಲ್ಕುಮಾರ್, ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಅವರು ಭಾಗವಹಿಸಿದ್ದರು.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


