HomeStoriesThings to remember while performing Shiva Puja - ಶಿವಪೂಜೆ ಮಾಡುವಾಗ ನೆನಪಿಡಬೇಕಾದ ಅಂಶಗಳು

Things to remember while performing Shiva Puja – ಶಿವಪೂಜೆ ಮಾಡುವಾಗ ನೆನಪಿಡಬೇಕಾದ ಅಂಶಗಳು

Things to remember while performing Shiva Puja - ಶಿವಪೂಜೆ ಮಾಡುವಾಗ ನೆನಪಿಡಬೇಕಾದ ಅಂಶಗಳು

Spread the love

Things to remember while performing Shiva Puja – ಶಿವಪೂಜೆ ಮಾಡುವಾಗ ನೆನಪಿಡಬೇಕಾದ ಅಂಶಗಳು

ದೇವಾದಿ ದೇವ ಶಿವನು ಅಲಂಕಾರ ಬಯಸದ ಸರಳ ದೇವ. ಅತ್ಯಂತ ಶಕ್ತಿವಂತನಾದ ಶಿವನು ಭಸ್ಮವನ್ನು ಹಾಗೂ ಸರಳ ಪೂಜಾ ವಿಧಾನವನ್ನು ಆಶಿಸುವನು. ನಿರ್ಮಲ ಮನಸ್ಸಿನಿಂದ ಸಲ್ಲಿಸುವ ಪೂಜೆಯು ಶಿವನಿಗೆ ಅತ್ಯಂತ ಸಂತೋಷವನ್ನು ತಂದುಕೊಡುವುದು. ಯಾರು ಶ್ರದ್ಧಾ- ಭಕ್ತಿಯಿಂದ ಪೂಜೆಯನ್ನು ಸಲ್ಲಿಸುವರೋ ಅವರಿಗೆ ಶಿವನ ಆಶೀರ್ವಾದ ದೊರೆಯುವುದು. ಶಿವ ಪುರಾಣ ಹಾಗೂ ಇತರ ಹಿಂದೂ ದಂತಕಥೆಗಳ ಪ್ರಕಾರ ಶಿವನಿಗೆ ಕೆಲವು ಧಾನ್ಯಗಳು ಅತ್ಯಂತ ಪ್ರಿಯವಾದ ವಸ್ತುಗಳು. ಶಿವ ಪೂಜೆ ಅಥವಾ ವ್ರತವನ್ನು ಕೈಗೊಳ್ಳುವಾಗ ಶಿವನಿಗೆ ಇಷ್ಟವಾಗುವ ಧಾನ್ಯಗಳು ಹಾಗೂ ಪೂಜಾ ಪದ್ಧತಿಯನ್ನು ಅನುಸರಿಸಬೇಕು. ಆಗ ಶಿವನು ಸಂತುಷ್ಟನಾಗುವನು. ಜೊತೆಗೆ ಭಕ್ತರ ಜೀವನದಲ್ಲಿ ಸುಖ-ಸಂತೋಷ ನೆಲೆಸುವಂತೆ ಹರಸುವನು. ಅವರ ಜೀವನದಲ್ಲಿ ಸದಾ ನೆಮ್ಮದಿ ಹಾಗೂ ಸಂತುಷ್ಟ ಭಾವನೆ ಇರುವಂತೆ ಮಾಡುವನು. ಸರ್ವ ಶಕ್ತನಾದ ಶಿವನ ಆಶೀರ್ವಾದ ಪಡೆಯಲು ಯಾವ ಕ್ರಮವನ್ನು ಕೈಗೊಳ್ಳಬೇಕು? ಎನ್ನುವುದನ್ನು ತಿಳಿಯಲು ಮುಂದಿನ ವಿವರಣೆಯನ್ನು ಪರಿಶೀಲಿಸಿ.ಶಿವನಿಗೆ ಮೀಸಲಾದ ತಿಂಗಳು

Read this – Chitradurga Uncle Love Story  Man Murderedಲವ್ ಕಹಾನಿ!

ಶಿವನಿಗೆ ಮೀಸಲಾದ ತಿಂಗಳು

ಹಿಂದೂ ಪಂಚಾಂಗದ ಪ್ರಕಾರ ಕೆಲವು ಮಾಸಗಳು ದೇವತೆಗಳ ಪೂಜೆಗೆ ಹಾಗೂ ಹರಕೆಯನ್ನು ಒಪ್ಪಿಸಲು ಪವಿತ್ರವಾದ ಸಮಯವನ್ನು ಒಳಗೊಂಡಿರುತ್ತವೆ. ಕೆಲವು ಮಾಸಗಳಲ್ಲಿ ಪೂಜೆ ಹಾಗೂ ಶುಭ ಕಾರ್ಯಗಳನ್ನು ನಿಷೇಧಿಸಲಾಗುವುದು. ಹನ್ನೆರಡು ಮಾಸಗಳಲ್ಲಿ ಶ್ರಾವಣ ಮಾಸವನ್ನು ಶಿವನಿಗೆ ಅರ್ಪಿತವಾದ ಮಾಸ ಎಂದು ಪರಿಗಣಿಸಲಾಗುವುದು. ಶ್ರಾವಣ ಮಾಸದಲ್ಲಿ ಶಿವನಿಗಾಗಿ ವಿಶೇಷ ಪೂಜೆ ಹಾಗೂ ವ್ರತವನ್ನು ಕೈಗೊಂಡರೆ ಪುಣ್ಯದೊರೆಯುವುದು ಎಂದು ಧಾರ್ಮಿಕ ಚಿಂತನೆಗಳು ತಿಳಿಸುತ್ತವೆ.ರುದ್ರಾಭಿಷೇಕ ಪೂಜೆ

Read this – Story of Ravan Kannada Version of Ravan Episodes Series

ರುದ್ರಾಭಿಷೇಕ ಪೂಜೆ

ಸೋಮವಾರವು ಶಿವನಿಗೆ ಅರ್ಪಿತವಾದ ದಿನ. ಯಾವುದೇ ಸೋಮವಾರ ಹಾಗೂ ಶ್ರಾವಣ ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ಪೂಜೆಯನ್ನು ಕೈಗೊಳ್ಳುವುದು ಹಾಗೂ ಆ ದಿನ ಪೂರ್ತಿ ಉಪವಾಸ ವ್ರತವನ್ನು ಆಚರಿಸಿದರೆ ಜೀವನದಲ್ಲಿ ಇರುವ ಪಾಪಕರ್ಮಗಳು ತೊಳೆದು ಹೋಗುತ್ತವೆ. ಪುಣ್ಯ ಪ್ರಾಪ್ತಿಯಾಗುವುದರ ಜೊತೆಗೆ ಜೀವನವು ಸಂತೋಷದಿಂದ ಕೂಡಿರುತ್ತದೆ ಎನ್ನುವ ನಂಬಿಕೆಯಿದೆ. ಸೋಮವಾರದಂದು ಮತ್ತು ಶಿವರಾತ್ರಿಯ ವಿಶೇಷ ಸಮಯದಲ್ಲಿ ಶಿವನ ಮೂರ್ತಿಗೆ ಅಥವಾ ಶಿವಲಿಂಗಕ್ಕೆ ತಣ್ಣನೆಯ ಹಾಲಿನ ಅಭಿಷೇಕ, ಬಿಲ್ವ ಪತ್ರೆಯ ಅಲಂಕಾರ, ಭಾಂಗ್ ಧಾತುರ ಮತ್ತು ಪಂಚಾಮೃತವನ್ನು ನೈವೇದ್ಯಕ್ಕೆ ಇರಿಸಬೇಕು. ಒಂದಿಷ್ಟು ಸಮಯಗಳ ಕಾಲ ಶಿವನ ಧ್ಯಾನವನ್ನು ಮಾಡಬೇಕು. ಆಗ ಶಿವನ ಕೃಪೆಗೆ ಒಳಗಾಗಬಹುದು ಎಂದು ಶಿವ ಪುರಾಣ ಮತ್ತು ವೇದಗಳಲ್ಲಿ ಉಲ್ಲೇಖಿಸಲಾಗಿದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×