HomeStoriesAyyappa Swamy Mantra - ಅಯ್ಯಪ್ಪ ಸ್ವಾಮಿ ಮೂಲ ಮಂತ್ರ ಪಠಿಸೋದರ ಪ್ರಯೋಜನವೇನು? - Top...

Ayyappa Swamy Mantra – ಅಯ್ಯಪ್ಪ ಸ್ವಾಮಿ ಮೂಲ ಮಂತ್ರ ಪಠಿಸೋದರ ಪ್ರಯೋಜನವೇನು? – Top Devotional stories

Ayyappa Swamy Mantra - ಅಯ್ಯಪ್ಪ ಸ್ವಾಮಿ ಮೂಲ ಮಂತ್ರ ಪಠಿಸೋದರ ಪ್ರಯೋಜನವೇನು? - Top Devotional stories

Ayyappa Swamy Mantra – ಅಯ್ಯಪ್ಪ ಸ್ವಾಮಿ ಮೂಲ ಮಂತ್ರ ಪಠಿಸೋದರ ಪ್ರಯೋಜನವೇನು? – Top Devotional storiesAyyappa SwamyRead this – Ayyappa Swamy-ಅಯ್ಯಪ್ಪ ಮಾಲಾಧಾರಿಗಳು ಕಪ್ಪು ಬಟ್ಟೆ ಧರಿಸೋದೇಕೆ?-Top Devotional stories

ಭಗವಾನ್‌ ಅಯ್ಯಪ್ಪ ಅಥವಾ ಅಯ್ಯಪ್ಪನ್‌ ಎಂದು ಕರೆಯಲ್ಪಡುವ ಭಗವಾನ್‌ ಶಾಸ್ತಾನು ಅತ್ಯಂತ ಶಕ್ತಿಶಾಲಿ ಹಿಂದೂ ದೇವರುಗಳಲ್ಲಿ ಒಬ್ಬನಾಗಿದ್ದಾನೆ. ಅಯ್ಯಪ್ಪ ಸ್ವಾಮಿಯು ಭಗವಾನ್ ಶಿವ ಮತ್ತು ಭಗವಾನ್‌ ವಿಷ್ಣು ಈ ಇಬ್ಬರ ಸಾಮರ್ಥ್ಯ ಮತ್ತು ಗುಣಗಳನ್ನು ಸಂಯೋಜಿಸುತ್ತಾನೆ. ಅಯ್ಯಪ್ಪ ಸ್ವಾಮಿಯು ಮೋಹಿನಿ ರೂಪಿ ವಿಷ್ಣು ಮತ್ತು ಶಿವನ ಮಗ. ದಕ್ಷಿಣ ಭಾರತದಲ್ಲಿ ಅಯ್ಯಪ್ಪ ಸ್ವಾಮಿಯನ್ನು ಹೇರಳವಾಗಿ ಆರಾಧಿಸಲಾಗುತ್ತದೆ.

ಅಯ್ಯಪ್ಪ ಸ್ವಾಮಿಯನ್ನು ಆರಾಧಿಸಲು ಮಂತ್ರಗಳನ್ನು ಬಳಸಲಾಗುತ್ತದೆ. ಅಯ್ಯಪ್ಪನ ಘೋಷವನ್ನು ಕೂಗಲಾಗುತ್ತದೆ. ನಮ್ಮ ಈ ಲೇಖನದಲ್ಲಿ ಅತ್ಯಂತ ಕಷ್ಟಕರವಾದ ಸಮಸ್ಯೆಗಳನ್ನು ಮತ್ತು ಅಪಾಯಗಳನ್ನು ತೊಡೆದುಹಾಕಲು ಮತ್ತು ಅದೇ ಸಮಯದಲ್ಲಿ ನಮ್ಮೆಲ್ಲಾ ಆಸೆಗಳನ್ನು ಪೂರೈಸಿಕೊಳ್ಳಲು ಸಹಾಯ ಮಾಡುವ ಅಯ್ಯಪ್ಪನ ಶಕ್ತಿಶಾಲ ಮಂತ್ರದ ಕುರಿತು ಹೇಳಲಾಗಿದೆ.

Read this – Sabarimala-ಶಬರಿಮಲೆ ಯಾತ್ರೆ ಎಷ್ಟು ಕಠಿಣವಾಗಿರುತ್ತೆ?-Top Devotional stories of Ayyappa Swamy

ಇದು ಅತ್ಯಂತ ಪ್ರಯೋಜನಕಾರಿ ಮಂತ್ರವಾಗಿದ್ದು, ಶತ್ರುಗಳು, ರಹಸ್ಯ ಶತ್ರುಗಳು, ರೋಗಗಳು-ಸಾಂಕ್ರಾಮಿಕ ರೋಗಗಳು, ತಂತ್ರ – ಮಂತ್ರಗಳು ಮತ್ತು ದೆವ್ವಗಳಿಂದ ಬರುವ ಅಪಾಯಗಳು, ಆತ್ಮಗಳು ಮತ್ತು ರಾಕ್ಷಸರಿಂದ ಬರುವ ಸಮಸ್ಯೆಗಳು, ಗೃಹಜೀವನ ಮತ್ತು ಸಂಗಾತಿಯ ಸಮಸ್ಯೆಗಳು, ಕಲಹಗಳು ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕುತ್ತದೆ. ವ್ಯಾಪಾರ, ಉದ್ಯೋಗ ಮತ್ತು ಯಾವುದೇ ಗಂಭೀರ ಸಮಸ್ಯೆ ಮತ್ತು ಅಪಾಯವಿದ್ದರೂ ಅವುಗಳನ್ನು ನಿರ್ಮೂಲನೆ ಮಾಡಲು ಈ ಅಯ್ಯಪ್ಪ ಮಂತ್ರಗಳನ್ನು ಪಠಿಸಬೇಕು. ಇದು ಅಯ್ಯಪ್ಪ ಸ್ವಾಮಿಯ ಮೂಲ ಮಂತ್ರವಾಗಿದೆ.

ಅಯ್ಯಪ್ಪ ಸ್ವಾಮಿಯ ಆಶೀರ್ವಾದವನ್ನು ಪಡೆಯಲು ಮಂತ್ರವನ್ನು ಹೇಗೆ ಪಠಿಸಬೇಕು..?
1. ಇದು ಭಗವಾನ್ ಅಯ್ಯಪ್ಪನ ಮೂಲ ಮಂತ್ರವಾಗಿರುವುದರಿಂದ, ಸಾಧಕರು ಅಯ್ಯಪ್ಪನನ್ನು ಯುವ, ಬಲಿಷ್ಠ ಮತ್ತು ಸುಂದರ ದೇವರಂತೆ ಚಿತ್ರಿಸಬೇಕು, ಅವರು ಹುಲಿಯ ಮೇಲೆ ಕುಳಿತಿರುವ ಚಿತ್ರವನ್ನು ಅಥವಾ ವಿಗ್ರಹವನ್ನಿಟ್ಟುಕೊಂಡು ನಂತರ ಮಂತ್ರವನ್ನು ಪಠಿಸಲು ಪ್ರಾರಂಭಿಸಬೇಕು.

Read this – Makara Jyothi  ಮಕರ ಜ್ಯೋತಿ ಯಾಕೆ ಅಯ್ಯಪ್ಪನ ದಿವ್ಯ ಸಂಕೇತ  Top Devotional stories of Ayyappa Swamy

2. ಸಾಧಕರು ಕೆಳಗೆ ನೀಡಲಾದ ಅಯ್ಯಪ್ಪ ಸ್ವಾಮಿಯ ಮೂಲ ಮಂತ್ರವನ್ನು 108 ಬಾರಿ ಜಪಿಸಬೇಕು ಅಥವಾ ಜಪಮಾಲೆಯನ್ನು ಬಳಸಿಕೊಂಡು ಕೂಡ ಮಂತ್ರವನ್ನು ಪಠಿಸಬಹುದು. ಪ್ರತಿದಿನ ಕನಿಷ್ಠ 5 ನಿಮಿಷಗಳ ಕಾಲವಾದರೂ ಈ ಮಂತ್ರವನ್ನು ಜಪಿಸಬೇಕು.
”ಓಂ ಧ್ರೂಂ ನಮಃ ಪರಾಯ ಗೋಪ್ತ್ರೇ ನಮಃ”

ಮಂತ್ರದ ಶಕ್ತಿ:
ಭಗವಾನ್ ಅಯ್ಯಪ್ಪನು ಸದ್ಗುಣದ ವ್ಯಕ್ತಿತ್ವ ಮತ್ತು ಧರ್ಮದ ಪಾಲಕ ಅಥವಾ ಮಾದರಿ ಜೀವನದ ವಿಧಾನವಾಗಿದ್ದಾನೆ. ಆದ್ದರಿಂದ, ಸಾಧಕರು ಸತ್ಯವಾದ ಮತ್ತು ಪ್ರಾಮಾಣಿಕ ಉದ್ದೇಶಗಳಿಗಾಗಿ ಮಂತ್ರವನ್ನು ಜಪಿಸಬೇಕು ಏಕೆಂದರೆ ಈ ಮಂತ್ರವು ನಂಬಿಕೆ, ಸಮರ್ಪಣೆ ಮತ್ತು ಬಲವಾದ ಇಚ್ಛಾಶಕ್ತಿಯಿಂದ ಪಠಿಸಿದರೆ ಪ್ರಚಂಡ ಶಕ್ತಿಯನ್ನು ಉತ್ಪಾದಿಸುತ್ತದೆ.

ಅಯ್ಯಪ್ಪ ಸ್ವಾಮಿ ಯ ಈ ಮಂತ್ರವನ್ನು ಅಂದರೆ ಅಯ್ಯಪ್ಪ ಸ್ವಾಮಿ ಮೂಲ ಮಂತ್ರವನ್ನು ಪಠಿಸುವುದರಿಂದ ಅಯ್ಯಪ್ಪ ಸ್ವಾಮಿಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ಅಯ್ಯಪ್ಪ ಸ್ವಾಮಿಯ ಮೂಲ ಮಂತ್ರವನ್ನು ಪಠಿಸುವುದರಿಂದ ಆತನು ಬಹುಬೇಗ ಪ್ರಸನ್ನನಾಗುತ್ತಾನೆ.

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×