Ugadi Special 2026 – ಯುಗಾದಿ ಪಚಡಿ ಪಾಕವಿಧಾನ
ಅಂತೂ-ಇಂತೂ ಯುಗಾದಿ ಹಬ್ಬ ಬಂದೇಬಿಟ್ಟಿತು. ಕಾತುರದಿಂದ ಕಾಯುತ್ತಿರುವ ಹಿಂದೂಗಳ ವರ್ಷದ ಆರಂಭದ ಶುಭ ಸಂದರ್ಭ ಇದು. ಹಾಗಾಗಿ ಇಡೀ ಭಾರತದಾದ್ಯಂತ ಹಿಂದುಗಳು ಇದನ್ನು ಹೊಸವರ್ಷ ಎಂದು ತಿಳಿದುಕೊಂಡು ಬೇವು-ಬೆಲ್ಲದ ಸಮಪ್ರಮಾಣದ ಸೇವನೆಯೊಂದಿಗೆ ಹಬ್ಬವನ್ನು ಬರಮಾಡಿಕೊಳ್ಳುತ್ತಾರೆ.
ಇಂದಿನ ಯುಗಾದಿ ಹಬ್ಬ ಹಚ್ಚಹಸುರಾಗಿ ಅತ್ಯಂತ ಸಂಭ್ರಮ ಸಂತೋಷದಿಂದ ಆಚರಣೆ ಮಾಡಿದರೆ ಇಡೀ ವರ್ಷದ ತುಂಬಾ ನಾವು ಇದೇ ರೀತಿ ಖುಷಿಯಾಗಿ ಆನಂದದಿಂದ ಜೀವನ ನಡೆಸುತ್ತೇವೆ ಎಂಬುದು ಎಲ್ಲರ ನಂಬಿಕೆ. ಆದರೆ ಇನ್ನೂ ಕೂಡ ಕೊರೊನಾ ಅಲ್ಲಲ್ಲಿ ಕಂಡು ಬರುತ್ತಿರುವುದರಿಂದ, ಹಬ್ಬದ ಆಚರಣೆಯಲ್ಲೂ ಸಹ ಸ್ವಲ್ಪ ಮಿತಿ ಕಾಯ್ದುಕೊಳ್ಳುವುದು ಒಳ್ಳೆಯದು. ನಮ್ಮ ಮನೆಯ ಮಟ್ಟಿಗೆ ನಾವು ಹಬ್ಬವನ್ನು ಮನೆಮಂದಿಯ ಸಹಿತ ಖುಷಿಯಾಗಿ ಆಚರಣೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು.
ಬನ್ನಿ ಇಂದಿನ ಲೇಖನದಲ್ಲಿ ಯುಗಾದಿ ಹಬ್ಬದ ಸ್ಪೆಷಲ್ ಅಡುಗೆ ಪಚಡಿ ಬಗ್ಗೆ ಸ್ವಲ್ಪ ಮಾಹಿತಿ ತಿಳಿದುಕೊಳ್ಳೋಣ ಮತ್ತು ಅಡುಗೆ ತಯಾರಿಯಲ್ಲಿ ಉಪಯೋಗಿಸುವ ಕೆಲವೊಂದು ವಸ್ತುಗಳ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.![]()
Read this – Ugadi special foods; ರುಚಿಕರವಾದ ಯುಗಾದಿ ಪಾಕವಿಧಾನಗಳು|Folks Food
ಬೇವು
- ಬೇವು ತಿನ್ನಲು ಕಹಿ. ಯುಗಾದಿ ಹಬ್ಬದಲ್ಲಿ ಸಿಹಿ ಮತ್ತು ಕಹಿಯ ಸಮ ಪ್ರಮಾಣದ ಸೇವನೆ ಇರುತ್ತದೆ. ಇದರ ಮುಖ್ಯ ಉದ್ದೇಶ ವೆಂದರೆ ಸಿಹಿ ಮತ್ತು ಕಹಿಯಂತೆ ನಮ್ಮ ಬಾಳಿನಲ್ಲಿ ಸುಖ ಮತ್ತು ಕಷ್ಟಗಳು ಸಮಪ್ರಮಾಣದಲ್ಲಿ ಬರಲಿ ಎನ್ನುವುದಾಗಿರುತ್ತದೆ.
- ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಬೇವಿನ ಹೂಗಳಲ್ಲಿ ಮತ್ತು ಎಲೆಗಳಲ್ಲಿ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಕಂಡುಬರುತ್ತದೆ.
- ಸಾಧಾರಣವಾಗಿ ಇವುಗಳು ಮನುಷ್ಯನ ದೇಹದಲ್ಲಿ ರಕ್ತ ಸಂಚಾರದಲ್ಲಿ ಕಂಡುಬರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
- ಇದು ಫಲವತ್ತತೆಯ ವಿಚಾರದಲ್ಲಿ ಸಹಾಯ ಮಾಡು ವುದು ಮಾತ್ರವಲ್ಲದೆ ದೇಹದಲ್ಲಿ ವಿಷಕಾರಿ ತ್ಯಾಜ್ಯ ಗಳನ್ನು ಸಹ ನಿವಾರಣೆ ಮಾಡುವ ಗುಣವನ್ನು ಪಡೆದಿದೆ. ಇದರಿಂದ ಆರೋಗ್ಯಕರವಾದ ದೈಹಿಕ ಸ್ಥಿತಿ ನಮ್ಮದಾ ಗಲಿದೆ.
- ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಾಗಿರುವ ಬೇವಿನ ಎಲೆ ಮತ್ತು ಹೂಗಳನ್ನು ಸೇವನೆ ಮಾಡುವುದ ರಿಂದ ದೇಹದಲ್ಲಿ ಫ್ರೀ ರಾಡಿಕಲ್ ಅಂಶಗಳ ಕಾರಣದಿಂದ ಉಂಟಾಗುವ ಉರಿಯೂತ ಸಮಸ್ಯೆ ದೂರವಾಗುತ್ತದೆ.
ಹಸಿ ಮಾವಿನಕಾಯಿ
ಹಸಿ ಮಾವಿನಕಾಯಿ ಹುಳಿಯ ಸ್ವಭಾವ ಹೊಂದಿದ್ದು, ಮಾವಿನಕಾಯಿಯನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ಬಿಸಿಲಿಗೆ ಉಂಟಾಗುವ ಆರೋಗ್ಯದ ಅವ್ಯವಸ್ಥೆ, ರಕ್ತದ ಒತ್ತಡದ ನಿರ್ವಹಣೆ, ಜೀರ್ಣಶಕ್ತಿಯ ಅಭಿವೃದ್ಧಿ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಬೆಲ್ಲ
- ಬೆಲ್ಲ ಒಂದು ನೈಸರ್ಗಿಕವಾದ ಸಿಹಿ ಪದಾರ್ಥ ಆಗಿದ್ದು, ಹೆಚ್ಚಾಗಿ ಕಬ್ಬಿನಿಂದ ತಯಾರಾಗುತ್ತದೆ. ಬೆಲ್ಲವನ್ನು ಉಗಾದಿ ಹಬ್ಬದ ಪಚಡಿ ತಯಾರಿಯಲ್ಲಿ ಬಳಸುತ್ತಾರೆ.
- ವೈಜ್ಞಾನಿಕವಾಗಿ ಇದರ ಉಪಯೋಗವನ್ನು ನೋಡು ವುದಾದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ, ಲಿವರ್ ಭಾಗವನ್ನು ಸ್ವಚ್ಛಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
- ಸಕ್ಕರೆ ಅಂಶಕ್ಕೆ ಹೋಲಿಸಿದರೆ ಬೆಲ್ಲ ನಮಗೆ ಸಾಕಷ್ಟು ಆರೋಗ್ಯಕರ ಎಂದು ಹೇಳುತ್ತಾರೆ. ನಿಸರ್ಗ ರೂಪದ ಸಕ್ಕರೆ ಪ್ರಮಾಣ ಇದರಲ್ಲಿ ಕಂಡುಬರುವುದರಿಂದ ಯಾವುದೇ ಅಡ್ಡಪರಿಣಾಮಗಳು ನಮಗೆ ಉಂಟಾಗುವುದಿಲ್ಲ.
Read this – Why We Are Celebrating Ugadi; ನಾವು ಯುಗಾದಿಯನ್ನು ಏಕೆ ಆಚರಿಸುತ್ತೇವೆ?|Kannada Folks
ಕಪ್ಪು ಮೆಣಸು
- ಮೆಣಸು ಸ್ವಲ್ಪ ಕಾರದ ಸ್ವಭಾವ ಹೊಂದಿದೆ. ಅದು ಕಪ್ಪು ಮೆಣಸು ಅಥವಾ ಕೆಂಪು ಮೆಣಸು ಯಾವುದೇ ಆದರೂ ಸರಿ, ನಮಗೆ ಕೋಪ ಮತ್ತು ಭಾವನೆಗಳು ಬರುವ ಪ್ರತಿರೂಪವನ್ನು ಇದು ಪ್ರತಿನಿಧಿಸುತ್ತದೆ.
- ಆದರೆ ಕಪ್ಪು ಮೆಣಸನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ನಿಮಗೆ ಎದುರಾಗುವ ಅಜೀರ್ಣತೆ, ಮಾನಸಿಕ ಖಿನ್ನತೆ, ಕೆಮ್ಮು ಮತ್ತು ಮಾರಕ ಕ್ಯಾನ್ಸರ್ ಸಮಸ್ಯೆ ಯನ್ನು ದೂರ ಮಾಡಿಕೊಳ್ಳಬಹುದು.
ಹುಣಸೆಹಣ್ಣು
- ಹುಣಸೆಹಣ್ಣು ಎಂದ ತಕ್ಷಣ ಬಾಯಲ್ಲಿ ನೀರೂರಲು ಪ್ರಾರಂಭ ವಾಗುತ್ತದೆ. ಹುಣಸೆ ಮರ ಮುಪ್ಪಾದರೂ ಅದರ ಹುಳಿ ಮಾತ್ರ ಕಡಿಮೆ ಆಗುವುದಿಲ್ಲ ಎನ್ನುವ ಮಾತಿದೆ.
- ಯುಗಾದಿ ಹಬ್ಬದ ಪಚಡಿ ತಯಾರಿಯಲ್ಲಿ ಹುಣಸೆಹಣ್ಣು ಬಳಕೆ ಮಾಡುವುದರಿಂದ ಆರೋಗ್ಯಕ್ಕೆ ಅನುಕೂಲಗಳು ಜಾಸ್ತಿ.
- ಬೇಸಿಗೆ ಕಾಲದಲ್ಲಿ ನಮ್ಮ ಕಣ್ಣುಗಳ ರಕ್ಷಣೆ ಅಗತ್ಯವಾಗಿ ಆಗಬೇ ಕಾಗಿರುವುದರಿಂದ ಆರೋಗ್ಯ ಪ್ರಯೋಜನಗಳು ಸಾಕಷ್ಟು ಸಿಗುತ್ತವೆ. ಮುಖ್ಯವಾಗಿ ನಮ್ಮ ಕಣ್ಣುಗಳ ರಕ್ಷಣೆ ಜೊತೆಗೆ ಕಣ್ಣು ಗಳಿಗೆ ಸಾಕಷ್ಟು ತಂಪಿನ ಪ್ರಭಾವ ಉಂಟಾಗುತ್ತದೆ. ಇದರ ಜೊತೆಗೆ ರಕ್ತದ ಒತ್ತಡ ನಿರ್ವಹಣೆ ಯಾಗುತ್ತದೆ.
- ಜೊತೆಗೆ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಿ ದೇಹದ ಜೀರ್ಣ ಶಕ್ತಿ ಉತ್ತಮವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಕರುಳಿನ ಭಾಗದ ಕ್ಯಾನ್ಸರ್ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
ಯುಗಾದಿಯ ಪಚಡಿ ತಯಾರಿ ಮಾಡುವುದು ಹೇಗೆ?
- ಮೊದಲಿಗೆ 1 ಟೀಚಮಚ ಆಗುವಷ್ಟು ಬೇವಿನ ಹೂಗಳನ್ನು ತೆಗೆದುಕೊಳ್ಳಿ.
- 1 ಟೇಬಲ್ ಚಮಚ ತುರಿದ ಹಸಿ ಮಾವಿನಕಾಯಿ
- ಒಂದು ಸಣ್ಣ ಗಾತ್ರದ ಹುಣಸೆಹಣ್ಣು
- ಕಾಲು ಟೀ ಚಮಚ ಉಪ್ಪು
- ಅರ್ಧ ಟೀ ಚಮಚ ಕೆಂಪು ಮೆಣಸಿನಕಾಯಿ ಪುಡಿ ಅಥವಾ ಕಪ್ಪು ಕಾಳುಮೆಣಸಿನಪುಡಿ
- ಎರಡು ಟೇಬಲ್ ಚಮಚ ಬೆಲ್ಲ ಎಲ್ಲವನ್ನೂ ಒಟ್ಟಿಗೆ ಮಿಶ್ರಣಮಾಡಿ ಯುಗಾದಿ ಹಬ್ಬದ ಪಚಡಿ ತಯಾರಿ ಮಾಡಬಹುದು.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


