HomeNewsShreyas Patel-Swaroop Prakash stand hand in hand, KN Rajanna jokes - kannadaರೇವಣ್ಣಗೆ...

Shreyas Patel-Swaroop Prakash stand hand in hand, KN Rajanna jokes – kannadaರೇವಣ್ಣಗೆ ಫೋಟೋ ಕಳಿಸ್ತೀನಿ ಇರಿ’: ಕೈ, ಕೈ ಹಿಡಿದು ನಿಂತ ಶ್ರೇಯಸ್ ಪಟೇಲ್-ಸ್ವರೂಪ್ ಪ್ರಕಾಶ್‌ಗೆ ಕೆಎನ್ ರಾಜಣ್ಣ ತಮಾಷೆ

Spread the love

ರೇವಣ್ಣಗೆ ಫೋಟೋ ಕಳಿಸ್ತೀನಿ ಇರಿ‘: ಕೈ, ಕೈ ಹಿಡಿದು ನಿಂತ ಶ್ರೇಯಸ್              ಪಟೇಲ್ಸ್ವರೂಪ್ ಪ್ರಕಾಶ್ಗೆ ಕೆಎನ್ ರಾಜಣ್ಣ ತಮಾಷೆ

ಹಾಸನಾಂಬ ದೇವಸ್ಥಾನಕ್ಕೆ ಸಚಿವ ಕೋ.ರಾಜಣ್ಣ ಭೇಟಿ:ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸಿದ್ಧತೆಗಳ ಪರಿಶೀಲನೆಗಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಹಾಸನ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ, ಸಂಸದ ಶ್ರೇಯಸ್‌ ಪಟೇಲ್‌ ಹಾಗೂ ಶಾಸಕ ಸ್ವರೂಪ್‌ಪ್ರಕಾಶ್‌ ಕೈ ಕೈ ಹಿಡಿದು ನಿಂತು ಅತ್ಮೀಯವಾಗಿ ಮಾತನಾಡುತ್ತಿದ್ದುದ್ದನ್ನು ಕಂಡು ತಮಾಷೆ ಮಾಡಿದ್ದಾರೆ.

  • ರೇವಣ್ಣಗೆ ಫೋಟೋ ಕಳುಹಿಸುವುದಾಗಿ ಹಾಸ್ಯ ಮಾಡಿದ ಉಸ್ತುವಾರಿ ರಾಜಣ್ಣ
  • ಕೈ ಕೈ ಹಿಡಿದು ನಿಂತಿದ್ದ ಸಂಸದ ಶ್ರೇಯಸ್‌ ಪಟೇಲ್‌ ಹಾಗೂ ಶಾಸಕ ಸ್ವರೂಪ್‌ಪ್ರಕಾಶ್‌
  • ಹಾಸನಾಂಬ ಉತ್ಸವದ ಶೇ.90ರಷ್ಟು ಸಿದ್ಧತೆ ಪೂರ್ಣ, 20 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಹಾಸನ: ”ನೀವಿಬ್ಬರೂ ಕೈ, ಕೈ ಹಿಡಿದು ನಿಂತಿರುವುದನ್ನು ರೇವಣ್ಣ ನೋಡಲಿ. ಫೋಟೋ ಕಳುಹಿಸುತ್ತೇನೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಅವರು ಶಾಸಕ ಸ್ವರೂಪ್‌ ಪ್ರಕಾಶ್‌ ಹಾಗೂ ಸಂಸದ ಶ್ರೇಯಸ್‌ ಪಟೇಲ್‌ಗೆ ತಮಾಷೆ ಮಾಡಿದರು.ಅ.24 ರಿಂದ ನ. 3ರವರೆಗೆ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿದ್ದ ಸಚಿವ ರಾಜಣ್ಣ ಅವರು ಪೂರ್ವ ಸಿದ್ಧತೆ ಪರಿಶೀಲಿಸಿದರು. ಈ ವೇಳೆ ದೇವಾಲಯದ ಮುಖ್ಯದ್ವಾರದ ಬಳಿ ಸಂಸದ ಶ್ರೇಯಸ್‌ ಪಟೇಲ್‌ ಹಾಗೂ ಶಾಸಕ ಎಚ್‌.ಪಿ. ಸ್ವರೂಪ್‌ಪ್ರಕಾಶ್‌ ಕೈ ಕೈ
  • ಪ್ರಜ್ವಲ್ ಅತ್ಯಾಚಾರ, ರೇವಣ್ಣ ಲೈಂಗಿಕ ಕಿರುಕುಳ ದೃಢ:ಚಾರ್ಜ್‌ಶೀಟ್‌ ಸಲ್ಲಿಸಿದ SIT
  • ಹಿಡಿದುಕೊಂಡು ನಿಂತಿರುವುದನ್ನು ನೋಡಿದ ಸಚಿವರು, ” ಇದೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಲು ಹೇಳುತ್ತೇನೆ. ರೇವಣ್ಣ ವೀಕ್ಷಣೆ ಮಾಡಲಿ” ಎಂದು ಹಾಸ್ಯ ಮಾಡುವ ಮೂಲಕ ಅವರಿಬ್ಬರ ನಡುವಿನ ಆತ್ಮೀಯತೆಯನ್ನು ಪ್ರಶಂಸಿಸಿದರು.ಕಾರ‍್ಯಕ್ರಮದಲ್ಲಿ ಇಬ್ಬರೂ ಜತೆಯಾಗಿ ಪಾಲ್ಗೊಳ್ಳುತ್ತೇವೆ ಎಂದ ಶಾಸಕ ಎಚ್‌.ಪಿ. ಸ್ವರೂಪ್‌ಪ್ರಕಾಶ್‌ ಉತ್ತರಿಸಿದರು. ಸಚಿವರ ಹಾಸ್ಯಕ್ಕೆ ನಗುತ್ತಲೇ ನಿಂತ ಸಂಸದ ಶ್ರೇಯಸ್‌ಪಟೇಲ್‌, ನಂತರ ಕೈ,ಕೈ ಹಿಡಿದುಕೊಂಡೇ ಅಲ್ಲಿಂದ ನಿರ್ಗಮಿಸಿದರು.

    20 ಲಕ್ಷ ಭಕ್ತರ ಆಗಮನ ನಿರೀಕ್ಷೆ

    ಹಾಸನಾಂಬ ಉತ್ಸವ ಸಂಬಂಧ ಶೇ.90ರಷ್ಟು ಸಿದ್ಧತೆ ಪೂರ್ಣಗೊಂಡಿದೆ. ಈ ಬಾರಿ ಉತ್ಸವಕ್ಕೆ 20 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ತಿಳಿಸಿದರು

    ಜಿಪಂ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಅ.24 ರಂದು ಮಧ್ಯಾಹ್ನ 12ಕ್ಕೆ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಿದೆ. ತುಮಕೂರು ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೂ ಆಹ್ವಾನ ನೀಡಲಾಗಿದ್ದು, ಅವರ ಉಪಸ್ಥಿತಿಯಲ್ಲೇ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗುವುದು’’ ಎಂದರು.

    ‘‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹಾಸನಾಂಬೆ ದರ್ಶನಕ್ಕೆ ಆಹ್ವಾನಿಸಲಾಗಿದ್ದು, ಕಡ್ಡಾಯವಾಗಿ ಬರಬೇಕೆಂದು ಮನವಿ ಮಾಡಲಾಗಿದೆ’’ ಎಂದು ಸಚಿವ ರಾಜಣ್ಣ ತಿಳಿಸಿದರು‘‘ಹಾಸನಕ್ಕೆ ಹೆಚ್ಚು ಗೌರವ ಬರುವ ರೀತಿ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುವ ನಿಟ್ಟಿನಲ್ಲಿ ದೇವಿ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಳೆದ ವರ್ಷ 14.20 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಮಾಡಿದ್ದರು. ಈ ಬಾರಿ 20 ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆ ಇದೆ’’ ಎಂದರು.

    ‘‘ಹಾಸನಾಂಬೆ ಉತ್ಸವ ಅಂಗವಾಗಿ ಅ.26ರಿಂದ ಅ.29ರವರೆಗೆ ಜಿಪಂ ವತಿಯಿಂದ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ. ಹೇಮಾವತಿ ಪ್ರತಿಮೆ ಬಳಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ’’ ಎಂದು ತಿಳಿಸಿದರು.

     

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×