Jammu & Kashmir’s Ranji Cup Dream Achieved – ರಕ್ತಚರಿತ್ರೆಯ ನಾಡಿನಲ್ಲಿ ಕ್ರಿಕೆಟ್ ಕ್ರಾಂತಿ
ಜಮ್ಮು ಕಾಶ್ಮೀರ ಅಂದ್ರೆ ಥಟ್ಟನೆ ನೆನಪಾಗೋದು ಅಲ್ಲಿನ ಹಿಂಸಾಚಾರಗಳು, ಭಯೋತ್ಪಾದಕ ದಾಳಿಗಳು, ಇಂಡಿಯಾ ಪಾಕಿಸ್ತಾನ ಸಂಘರ್ಷ ಸೇರಿದಂತೆ ಅನೇಕ ಘಟನೆಗಳು. ಇದೇ ಕಾರಣಕ್ಕೆ ಭೂಲೋಕದ ಸ್ವರ್ಗ ಜಮ್ಮು ಕಾಶ್ಮೀರ ಕೆಟ್ಟ ಘಟನೆಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಆದ್ರೆ ಅದೇ ಜಮ್ಮು ಕಾಶ್ಮೀರದಲ್ಲಿ ಕಳೆದ ಒಂದು ದಶಕದಿಂದ ಪರಿಸ್ಥಿತಿ ಬದಲಾಗುತ್ತಿದೆ. ಬಂದೂಕು ಹಿಡಿಯೋ ಕೈಗಳು ಇದೀಗ ಕ್ರಿಕೆಟ್ ಬ್ಯಾಟ್ ಬಾಲ್ ಹಿಡಿಯುತ್ತಿವೆ. ಜಮ್ಮು ಕಾಶ್ಮೀರ ದಲ್ಲಿ ಅದ್ಯಾವ ಮಟ್ಟಿಗೆ ಕ್ರಿಕೆಟ್ ಕ್ರೇಜ್ ಬೆಳದಿದೆ ಅಂದ್ರೆ ಇಂದು ಮೊಟ್ಟಮೊದಲ ಬಾರಿಗೆ ರಣಜಿ ಕಪ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಹೌದು ಇದೇ ಮೊದಲ ಬಾರಿಗೆ ರಣಜಿ ಪೈನಲ್ಗೇರಿದ್ದ ಜಮ್ಮು ಕಾಶ್ಮೀರ ಮೊದಲ ಯತ್ನದಲ್ಲಿಯೇ ರಣಜಿ ಕಪ್ ಗೆದ್ದು ಬೀಗಿದೆ.![]()
Read this – Spirit movie ಪ್ರಭಾಸ್ ಸಿನಿಮಾದಿಂದ ಹೊರಬಂದ ಪ್ರಕಾಶ್ ರೈ : ಕಾರಣವೇನು?| Kannada Folks
ಪಂದ್ಯ ಹೀಗಿತ್ತು
ಹುಬ್ಬಳ್ಳಿಯ ರಾಜ್ ನಗರದಲ್ಲಿರುವ ಕೆಎಸ್ಸಿಎ ಸ್ಟೇಡಿಯಂನಲ್ಲಿ ಇದೇ ಪೆಬ್ರವರಿ 24 ರಿಂದ ರಣಜಿ ಪೈನಲ್ ಪಂದ್ಯ ಆರಂಭವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಜಮ್ಮು ಕಾಶ್ಮೀರ ತಂಡ ಸುಡು ಬಿಸಿಲಿನ ಹುಬ್ಬಳ್ಳಿ ಮೈದಾನದಲ್ಲಿ ರನ್ ಹೊಳೆಯನ್ನೇ ಹರಿಸಿತ್ತು. ಒಂದುವರೆ ದಿನ ಆಟವಾಡಿದ ಜಮ್ಮು ಕಾಶ್ಮೀರ ತಂಡ ಮೊದಲ ಇನ್ನಿಂಗ್ಸ್ನಲ್ಲಿ 584 ರನ್ಗಳ ಬೃಹತ್ ಮೊತ್ತ ಕಲೆಹಾಕಿ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್ಗೆ ಇಳದಿದ್ದ ಕರ್ನಾಟಕ ತಂಡ 293 ರನ್ಗಳಿಗೆ ಅಲೌಟ್ ಆಗಿತ್ತು.
ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ಹೊರತುಪಡಿಸಿದ್ರೆ ಬೇರಾವ ಆಟಗಾರರು ಉತ್ತಮ ಪ್ರದರ್ಶನ ತೋರಲಿಲ್ಲ. ಹೀಗಾಗಿ ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ 293 ರನ್ಗಳಿಗೆ ಸುಸ್ತಾಗಿತ್ತು. ಪಂದ್ಯದ ನಾಲ್ಕನೇ ದಿನದಂದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಜಮ್ಮುಕಾಶ್ಮಿರ ತಂಡ ಎರಡನೇ ಇನ್ನಿಂಗ್ಸ್ನಲ್ಲಿಯೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಎರಡನೇ ಇನ್ನಿಂಗ್ಸ್ನಲ್ಲಿ ಜಮ್ಮು ಆಟಗಾರ ಇಕ್ಬಾಲ್ ಶತಕ, ಕರ್ನಾಟಕದ ಜಯವನ್ನು ಮತ್ತಷ್ಟು ದೂರ ಮಾಡಿತು.
ಎಲ್ಲರ ಲೆಕ್ಕಾಚಾರ ಸುಳ್ಳು ಮಾಡಿದ ಜೆಕೆ
ಕಳೆದ 67 ವರ್ಷಗಳಿಂದ ಜಮ್ಮುಕಾಶ್ಮಿರ ತಂಡ ಕ್ರಿಕೆಟ್ ಆಡುತ್ತಿದೆ. ಆದ್ರೆ ಇತಿಹಾಸದಲ್ಲಿ ಮೊದಲ ಗೆಲುವಿಗಾಗಿ ಜಮ್ಮು ಕಾಶ್ಮೀರ ತಂಡ 23 ವರ್ಷಗಳ ಕಾಲ ಕಾಯಬೇಕಾಯಿತು. 1982-83ರಲ್ಲಿ ಸರ್ವಿಸಸ್ ತಂಡದ ವಿರುದ್ಧ ಮೊದಲ ಜಯ ಸಾಧಿಸಿತ್ತು. ಅನಂತರ ದೇಶಿ ಕ್ರಿಕೆಟ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತಂಡದಿಂದ ಬರದೇ ಇದ್ರು ಕಳೆದ ಕೆಲ ವರ್ಷಗಳಿಂದ ತಂಡ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಆದ್ರೆ ಇದೇ ಮೊದಲ ಬಾರಿಗೆ 67 ವರ್ಷದ ಇತಿಹಾಸದಲ್ಲಿ ಪೈನಲ್ ಪ್ರವೇಶಿಸಿದ್ದ ಜಮ್ಮುಕಾಶ್ಮಿರ ತಂಡ ಮೊದಲ ಯತ್ನದಲ್ಲಿಯೇ ಗೆಲವು ಸಾಧಿಸಿದೆ.
Read this – Bolivia Plane Tragedy ಕರೆನ್ಸಿ ಸಾಗಿಸುತ್ತಿದ್ದ ಹರ್ಕ್ಯುಲಸ್ ಹಡಗು ಅಪಘಾತ, 15 ಸಾವು| Kannada Folks
ಕ್ರಿಕೆಟ್ ನೋಡಲು ಬಂದ ಜಮ್ಮುಕಾಶ್ಮಿರ ಸಿಎಂ
ಇನ್ನು ಜಮ್ಮುಕಾಶ್ಮಿರ ತಂಡ ಮೊದಲ ಬಾರಿಗೆ ರಣಜಿ ಕಪ್ ಎತ್ತಿಹಿಡಿಯೋದು ಖಾತ್ರಿಯಾಗುತ್ತಿದ್ದಂತೆ ಜಮ್ಮುಕಾಶ್ಮಿರ ದ ಸಿಎಂ ಓಮರ್ ಅಬ್ದುಲ್ಲಾ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹುಬ್ಬಳ್ಳಿಗೆ ಆಗಮಿಸಿದ್ದರು. ನಿನ್ನೆ ರಾತ್ರಿಯೇ ಹುಬ್ಬಳ್ಳಿಗೆ ಬಂದಿದ್ದ ಓಮರ್ ಅಬ್ದುಲ್ಲಾ, ಇಂದು ಕೆಎಸ್ಸಿಎ ಮೈದಾನಕ್ಕೆ ಆಗಮಿಸಿ ಕ್ರಿಕೆಟ್ ವೀಕ್ಷಿಸಿದರು. ತಮ್ಮ ತಂಡದ ಆಟಗಾರರಿಗೆ ಪ್ರೋತ್ಸಾಹ ನೀಡಿದ್ರು. ಇಡೀ ದಿನ ಮೈದಾನದಲ್ಲಿ ಇದ್ದು ಐತಿಹಾಸಿಕ ಕ್ಷಣಗಳನ್ನು, ತಮ್ಮ ತಂಡದ ಆಟಗಾರರ ಆಟವನ್ನು ನೋಡಿ ಸಂತೋಷ ಪಟ್ಟರು. ಈ ಬಗ್ಗೆ ಮಾತನಾಡಿರೋ ಓಮರ್ ಅಬ್ದುಲ್ಲಾ, ನಮ್ಮ ತಂಡ ಈ ಹಂತಕ್ಕೆ ಬರೋದಿಲ್ಲಾ ಅಂತ ಎಲ್ಲರು ಹೇಳ್ತಿದ್ದರು. ಆದ್ರೆ ನಮ್ಮ ಆಟಗಾರರು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಪೈನಲ್ಗೆ ಬಂದಿದ್ದಾರೆ. ಪೈನಲ್ನಲ್ಲಿ ಕೂಡಾ ಉತ್ತಮ ಆಟವಾಡಿದ್ದಾರೆ. ಈ ಬಾರಿ ಕಪ್ ನಾವು ತೆಗೆದುಕೊಂಡು ಹೋಗ್ತೇವೆ ಅಂತ ಹೇಳಿದ್ದರು. ಅದರಂತೆ ಜೆಕೆ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿದಿದೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


