ಸರಕಾರಿ ಕೆಲಸದ ಆಮಿಷವೊಡ್ಡಿ 50 ಲಕ್ಷ ರೂ ವಂಚನೆ : ಹೆಡ್ ಕಾನ್ಸ್ಟೆಬಲ್ ಅಮಾನತು
ಬೆಂಗಳೂರು ಹೆಡ್ ಕಾನ್ ಸ್ಟೇಬಲ್ ವಂಚನೆ ಪ್ರಕರಣ:ಮಕ್ಕಳಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ಮಹಿಳೆಯನ್ನು ನಂಬಿಸಿದ್ದ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಸಿಎಆರ್) ಹೆಡ್ ಕಾನ್ಸ್ಟೆಬಲ್ ಪ್ರಶಾಂತ್ ಕುಮಾರ್, ಆಕೆಯಿಂದ ಸುಮಾರು 47 ಲಕ್ಷ ರೂ ಅಲ್ಲದೆ, ಚಿನ್ನಾಭರಣಗಳನ್ನೂ ಪೀಕಿಸಿದ್ದ. ನಕಲಿ ನೇಮಕಾತಿ ಆದೇಶದ ಪ್ರತಿಯನ್ನೂ ನೀಡಿದ್ದ.
- ಸಶಸ್ತ್ರ ಮೀಸಲು ಪೊಲೀಸ್ ಪಡೆ (ಸಿಎಆರ್) ಹೆಡ್ ಕಾನ್ಸ್ಟೆಬಲ್ ಪ್ರಶಾಂತ್ ಕುಮಾರ್
- ಮಕ್ಕಳಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಹಾಗೂ ಚಿನ್ನಾಭರಣ ಪಡೆದು ವಂಚನೆ
- ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳು, ಪತ್ತೆಗೆ ಶೋಧಬೆಂಗಳೂರು: ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ ಹಣ ಹಾಗೂ ಚಿನ್ನಾಭರಣ ಪಡೆದು ವಂಚಿಸಿದ ಆರೋಪದ ಮೇಲೆ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಸಿಎಆರ್) ಹೆಡ್ ಕಾನ್ಸ್ಟೆಬಲ್ ಪ್ರಶಾಂತ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದರ ಬೆನ್ನಲ್ಲೇ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
- ಸಿಎಆರ್ ಪ್ರಧಾನ ಕಚೇರಿಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿರುವ ಪ್ರಶಾಂತ್ಕುಮಾರ್ ಮಕ್ಕಳಿಗೆ ಸರಕಾರಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ 47 ಲಕ್ಷ ರೂ. ಮತ್ತು 857 ಗ್ರಾಂ ಚಿನ್ನಾಭರಣ ಪಡೆದು ಮೋಸ ಮಾಡಿದ್ದಾನೆ ಎಂದು ಮಹಾಲಕ್ಷ್ಮಿ ಲೇಔಟ್ ನಿವಾಸಿ ಭಾಗ್ಯಮ್ಮ ಎಂಬುವವರು ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ನಿವಾಸಿ ಭಾಗ್ಯಮ್ಮ ಎಂಬುವವರು ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.ನಕಲಿ ನೇಮಕಾತಿ ಆದೇಶ
ಪ್ರಶಾಂತ್ಕುಮಾರ್, ಏ.6ರಂದು ಭಾಗ್ಯಮ್ಮರನ್ನು ಎಂ.ಎಸ್.ಬಿಲ್ಡಿಂಗ್ ಬಳಿ ಕರೆಸಿಕೊಂಡು ಮಗನಿಗೆ ಕೆಲಸ ಸಿಕ್ಕಿರುವುದಾಗಿ ಹೇಳಿ ನಕಲಿ ನೇಮಕಾತಿ ಆದೇಶದ ಪ್ರತಿ ಕೊಟ್ಟಿದ್ದ. ನಂತರ ಜೂ.12ರಂದು ಭಾಗ್ಯಮ್ಮರ ಮನೆ ಬಳಿ ಹೋಗಿ ಮಗಳು ಎಫ್ಡಿಎ ಹುದ್ದೆಗೆ ಆಯ್ಕೆಯಾಗಿರುವುದಾಗಿ ನಕಲಿ ಆಯ್ಕೆಪಟ್ಟಿ ಕೊಟ್ಟು, 5 ಲಕ್ಷ ರೂ. ಪಡೆದಿದ್ದ. ಭಾಗ್ಯಮ್ಮ ಕುಟುಂಬ ಸದಸ್ಯರು ಅನುಮಾನಗೊಂಡು ನೇಮಕಾತಿ ಆದೇಶದ ಪ್ರತಿ ಮತ್ತು ಆಯ್ಕೆಪಟ್ಟಿಯನ್ನು ಪರಿಶೀಲನೆ ಮಾಡಿಸಿದಾಗ ಅವು ನಕಲಿ ಎಂದು ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೋಸ ಹೋಗಿರುವುದು ಗೊತ್ತಾಗಿ ಭಾಗ್ಯಮ್ಮ ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ. ಆಗ ಆತ ಅವರಿಗೆ 58 ಲಕ್ಷ ರೂ. ಮೊತ್ತದ ಬ್ಯಾಂಕ್ ಚೆಕ್ ಕೊಟ್ಟಿದ್ದ. ಆದರೆ, ಆತನ ಖಾತೆಯಲ್ಲಿ ಹಣವಿಲ್ಲದ ಕಾರಣ ಆ ಚೆಕ್ ಬೌನ್ಸ್ ಆಗಿದೆ. ಹೀಗಾಗಿ, ಭಾಗ್ಯಮ್ಮ ಅವರು ಪ್ರಶಾಂತ್ಕುಮಾರ್ನ ಮನೆ ಬಳಿ ಹೋಗಿ ಚೆಕ್ ಬೌನ್ಸ್ ವಿಚಾರ ತಿಳಿಸಿ ಹಣ ಕೊಡುವಂತೆ ಕೇಳಿದ್ದಾರೆ. ಆಗ ಹಣ ಕೊಡುವುದಿಲ್ಲ. ಏನೂ ಬೇಕಾದರೂ ಮಾಡಿಕೊಳ್ಳಿ ಎಂದು ಆತ ಬೆದರಿಕೆ ಹಾಕಿ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Wishing Darling of the Nation ‘The Rajasaab’ a very happy Happy Birthday Prabhasವಂಚನೆಯಲ್ಲಿ ಪ್ರಶಾಂತ್ಕುಮಾರ್ನ ಪತ್ನಿ ದೀಪಾ ಹಾಗೂ ಸ್ನೇಹಿತ ಪ್ರಶಾಂತ್ ಎಂಬಾತ ಸಹ ಭಾಗಿಯಾಗಿದ್ದಾನೆ. ಹೀಗಾಗಿ, ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.