ಗಡಿ ಸಂಘರ್ಷ ಶಮನಕ್ಕೆ ಭಾರತ–ಚೀನಾ ಸಹಮತ: ಕುತಂತ್ರಿ ಚೀನೀಯರನ್ನು ನಂಬಲು ಸಾಧ್ಯವೇ?
ಗಡಿ ಗಸ್ತುಗೆ ಭಾರತ-ಚೀನಾ ಒಪ್ಪಿಗೆ:ವಾಸ್ತವ ನಿಯಂತ್ರಣ ರೇಖೆ ಬಳಿ ಉಭಯ ದೇಶಗಳ ಸೇನೆ ಗಸ್ತು ತಿರುಗುವ ಸಂಬಂಧ ಭಾರತ ಮತ್ತು ಚೀನಾ ಒಪ್ಪಂದಕ್ಕೆ ಬಂದಿವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಆದರೆ ಈ ಬಗ್ಗೆ ಚೀನಾ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಹೀಗಾಗಿ ಚೀನಾ ಒಪ್ಪಂದವನ್ನು ಪಾಲಿಸುತ್ತದೆ ಎಂದು ನಂಬುವುದು ಸಾಧ್ಯವಿಲ್ಲ.
- ಬ್ರಿಕ್ಸ್ ಶೃಂಗಸಭೆ ಆರಂಭಕ್ಕೆ ಮುನ್ನವೇ ಉಭಯ ದೇಶಗಳ ನಡುವೆ ಒಪ್ಪಂದ
- ಭಾರತ-ಚೀನಾ ನಡುವೆ ವಾಸ್ತವ ನಿಯಂತ್ರಣ ರೇಖೆಯಲ್ಲಿನ ಗಡಿ ಸಂಘರ್ಷ ಶಮನ
- ವಿವಾದಿತ ಎರಡು ಪ್ರದೇಶಗಳಲ್ಲಿ ಉಭಯ ದೇಶಗಳ ಸೇನೆಗಳು ಗಸ್ತು ತಿರುಗುವ ವ್ಯವಸ್ಥೆಹೊಸದಿಲ್ಲಿ: ರಷ್ಯಾದ ಕಜಾನ್ನಲ್ಲಿ ಮಂಗಳವಾರದಿಂದ (ಅ.22) ನಡೆಯಲಿರುವ ‘ಬ್ರಿಕ್ಸ್’ ಶೃಂಗಸಭೆ ಆರಂಭಕ್ಕೂ ಮುನ್ನಾ ದಿನ ಸೋಮವಾರ ಭಾರತ-ಚೀನಾ ನಡುವೆ ವಾಸ್ತವ ನಿಯಂತ್ರಣ ರೇಖೆಯಲ್ಲಿನ ಗಡಿ ಸಂಘರ್ಷ ಶಮನಕ್ಕೆ ಒಪ್ಪಂದ ಏರ್ಪಟ್ಟಿದೆ.
ಪೂರ್ವ ಲಡಾಕ್ನಲ್ಲಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ವಿವಾದಿತ ಎರಡು ಪ್ರದೇಶಗಳಲ್ಲಿ ಉಭಯ ದೇಶಗಳ ಸೇನೆಗಳು ಗಸ್ತು ತಿರುಗುವ ವ್ಯವಸ್ಥೆರೂಪಿಸಿಕೊಳ್ಳಲು ಭಾರತ-ಚೀನಾ ಒಪ್ಪಂದಕ್ಕೆ ಬಂದಿವೆ. ಕಳೆದ ಜುಲೈನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಜತೆ ಮಹತ್ವದ ಸಭೆ ನಡೆಸಿದ್ದರು. ಅದು ಈಗ ಫಲಕೊಟ್ಟಿದೆಲಡಾಕ್ನ ವಿವಾದಿತ ಪ್ರದೇಶಗಳಾದ ಡೆಮ್ಚೊಕ್, ಡೆಪ್ಸಾಂಗ್ ಪ್ರದೇಶಗಳಲ್ಲಿ ಎರಡೂ ದೇಶದ ಸೇನೆಗಳ ಗಸ್ತು ರೂಪಿಸುವ ಒಪ್ಪಂದಕ್ಕೆ ಬರಲಾಗಿದೆ. ಈ ಸಂಬಂಧ ಉಭಯ ದೇಶಗಳ ವಿದೇಶಾಂಗ ಸಚಿವಾಲಯ, ರಕ್ಷಣಾ ಇಲಾಖೆಯ ಅಧಿಕಾರಿಗಳ ನಡುವೆ ಕೆಲವು ದಿನಗಳಿಂದ ನಡೆಯುತ್ತಿದ್ದ ಮಾತುಕತೆ ಫಲ ನೀಡಿದ್ದು, ವಾಸ್ತವ ನಿಯಂತ್ರಣ ರೇಖೆಯಲ್ಲಿನ ಗಡಿ ಸಂಘರ್ಷ ಶಮನಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.
ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ನಡೆದ ಮಾತುಕತೆಯಲ್ಲಿ ತೀರ್ಮಾನವಾಗಿದ್ದಂತೆ ಘರ್ಷಣೆಗೆ ಕಾರಣವಾಗಿದ್ದ ಪೂರ್ವ ಲಡಾಕ್ನ ನಾಲ್ಕು ವಿವಾದಿತ ಪ್ರದೇಶಗಳಿಂದ ಉಭಯ ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದವು. ಹೊಸ ಒಪ್ಪಂದದ ಪ್ರಕಾರ ಡೆಮ್ಚೊಕ್, ಡೆಪ್ಸಾಂಗ್ನಲ್ಲಿ ಉಭಯ ದೇಶಗಳ ಸೇನೆ ಗಸ್ತು ತಿರುಗಲು ಅವಕಾಶ ನೀಡಲಾಗಿದೆ.”ವಾಸ್ತವ ನಿಯಂತ್ರಣ ರೇಖೆಯಲ್ಲಿನ ಗಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಲವು ವಾರಗಳಿಂದ ಮಾತುಕತೆ ನಡೆಯುತ್ತಿತ್ತು. ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಆರಂಭವಾಗಿದ್ದ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲಾಗಿದೆ,” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
”ಬ್ರಿಕ್ಸ್ ಶೃಂಗಸಭೆ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಬಹುದು. ಉಭಯ ನಾಯಕರ ನಡುವೆ ಸಭೆ ಆಯೋಜಿಸಲು ಎರಡು ದೇಶಗಳ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ,” ಎಂದು ಮಿಸ್ರಿ ಹೇಳಿದರು
ಲಡಾಕ್ನ ಗಲ್ವಾನ್ ಕಣಿವೆಯಲ್ಲಿ 2020ರ ಜೂನ್ 15ರಂದು ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆಯಲ್ಲಿ ಭಾರತದ 20 ಮತ್ತು ಚೀನಾದ 40 ಸೈನಿಕರು ಮೃತಪಟ್ಟಿದ್ದಾರೆ. ಆ ನಂತರ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮನೆ ಮಾಡಿತ್ತು.
The Indian Independence Movement of Bhagat Singh
ದೊಡ್ಡ ರಾಷ್ಟ್ರಗಳ ನಡುವೆ ಗಡಿ ವಿಚಾರವಾಗಿ ಕೆಲವೊಂದು ಸಂಘರ್ಷಗಳು ನಡೆಯುತ್ತಿರುತ್ತವೆ. ಪ್ರಸ್ತುತ ಕಾಲಘಟ್ಟದಲ್ಲಿಸಮಸ್ಯೆ ಪರಿಹರಿಸಿಕೊಂಡು ಮುಂದೆ ಸಾಗಬೇಕು. ಭಾರತ–ಚೀನಾ ಒಪ್ಪಂದವು ಗಡಿ ಸಂಘರ್ಷ ಶಮನ ನಿಟ್ಟಿನಲ್ಲಿಆಶಾದಾಯಕ ಬೆಳವಣಿಗೆಯಾಗಿದೆ.
ಎಸ್.ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವ
ಧೋವಲ್ ತಂತ್ರಗಾರಿಕೆ
ಕಳೆದ ತಿಂಗಳು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಅವರನ್ನು ಭೇಟಿಯಾಗಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು, ಉಭಯ ದೇಶಗಳ ನಡುವಿನ ಗಡಿ ಸಂಘರ್ಷ ಶಮನ ಕುರಿತು ಚರ್ಚೆ ನಡೆಸಿದ್ದರು. ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಬ್ರಿಕ್ಸ್ ರಾಷ್ಟ್ರಗಳ ಉನ್ನತಾಧಿಕಾರಿಗಳ ಸಭೆ ವೇಳೆ ಧೋವಲ್-ವಾಂಗ್ ಯೀ ಮಾತುಕತೆ ನಡೆಸಿದ್ದರು.
ಚೀನಾವನ್ನು ನಂಬಲು ಸಾಧ್ಯವೇ?
ಉಭಯ ದೇಶಗಳ ನಡುವಿನ ಉದ್ವಗ್ನಿತೆ ಶಮನಕ್ಕೆ ಇದು ಮಹತ್ವದ ಹೆಜ್ಜೆಯಾದರೂ, ಚೀನಾ ನಡೆಯ ಬಗ್ಗೆ ಭಾರತ ಜಾಗ್ರತೆ ವಹಿಸಬೇಕು ಎಂದು ಪರಿಣತರು ಎಚ್ಚರಿಸಿದ್ದಾರೆ. ಇದು ನಿರ್ಣಾಯಕ ಬದಲಾವಣೆಗೆ ನೆರವಾಗಲಿದೆ ಎಂಬುದಾಗಿ ಭಾರತ ಭಾವಿಸಬಾರದು ಎಂದು ಸಲಹೆ ಕೊಟ್ಟಿದ್ದಾರೆ.
“ಈ ಒಡಂಬಡಿಕೆ ಬಗ್ಗೆ ಚೀನೀಯರು ಇನ್ನೂ ತಮ್ಮ ಹೇಳಿಕೆ ಬಿಡುಗಡೆ ಮಾಡಿಲ್ಲ. ಅದು ದೇಪ್ಸಂಗ್ ಮತ್ತು ದೆಮ್ಚಾಕ್ನಲ್ಲಿ ತಾನು ಕಬಳಿಸಿದ
ಭೂಮಿಯನ್ನು ವಾಪಸ್ ನೀಡುವುದಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಈ ಹೊಸ ಗಸ್ತು ಒಪ್ಪಂದ ಏನು ಎನ್ನುವುದನ್ನು ಕಾಲವೇ ಹೇಳಲಿದೆ. ಏಕೆಂದರೆ ಬಫರ್ ಝೋನ್ ಒಪ್ಪಂದದ ವೇಳೆಯೂ ಅವರು ತಮ್ಮ ಬುದ್ಧಿಯನ್ನು ನಿಧಾನವಾಗಿ ಪ್ರಕಟಿಸಿದ್ದರು” ಎಂದು ಭೂರಾಜಕೀಯತಂತ್ರ ಪರಿಣತ ಬ್ರಹ್ಮ ಚೆಲ್ಲಾನಿ ತಿಳಿಸಿದ್ದಾರೆ.