HomeNewsದೇವಸ್ಥಾನಗಳಲ್ಲಿನ ಧ್ವನಿವರ್ಧಕದಿಂದ ತೊಂದರೆ: ವಿವಾದ ಸೃಷ್ಟಿಸಿದ ಮಧ್ಯಪ್ರದೇಶ ಐಎಎಸ್ ಅಧಿಕಾರಿ ಹೇಳಿಕೆ

ದೇವಸ್ಥಾನಗಳಲ್ಲಿನ ಧ್ವನಿವರ್ಧಕದಿಂದ ತೊಂದರೆ: ವಿವಾದ ಸೃಷ್ಟಿಸಿದ ಮಧ್ಯಪ್ರದೇಶ ಐಎಎಸ್ ಅಧಿಕಾರಿ ಹೇಳಿಕೆ

Spread the love

ದೇವಸ್ಥಾನಗಳಲ್ಲಿನ ಧ್ವನಿವರ್ಧಕದಿಂದ ತೊಂದರೆ: ವಿವಾದ ಸೃಷ್ಟಿಸಿದ                    ಮಧ್ಯಪ್ರದೇಶ ಐಎಎಸ್ ಅಧಿಕಾರಿ ಹೇಳಿಕೆ

ಮಧ್ಯಪ್ರದೇಶದ ಐಎಎಸ್ ಕಚೇರಿ ಶೈಲಬಾಲಾ ಮಾರ್ಟಿನ್:

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಇತ್ತೀಚೆಗೆ ದುರ್ಗಾ ದೇವಿ ವಿಗ್ರಹ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಜೋರಾಗಿ ಮೊಳಗುತ್ತಿದ್ದ ಡಿಜೆ ಸದ್ದಿಗೆ ನರ್ತಿಸುತ್ತಿದ್ದ 13 ವರ್ಷದ ಬಾಲಕ, ಹಠಾತ್ತನೆ ಕುಸಿದು ಬಿದ್ದು ಮೃತಪಟ್ಟ ಘಟನೆಯು, ಶಬ್ದಮಾಲಿನ್ಯ ಕುರಿತಾದ ಚರ್ಚೆ ಹುಟ್ಟುಹಾಕಿದೆ. ಈ ಕುರಿತು ಐಎಎಸ್ ಅಧಿಕಾರಿಣಿ ಹೇಳಿಕೆ ವಿವಾದ ಸೃಷ್ಟಿಸಿದೆ.

  • ಮಧ್ಯಪ್ರದೇಶದ ಹಿರಿಯ ಐಎಎಸ್ ಅಧಿಕಾರಿ ಶೈಲ್‌ಬಾಲಾ ಮಾರ್ಟಿನ್ ಹೇಳಿಕೆ
  • ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ಪ್ರಶ್ನಿಸಿದ ಐಎಎಸ್ ಅಧಿಕಾರಿಣಿ
  • ಅಧಿಕಾರಿ ವಿರುದ್ಧ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ ಹಿಂದೂಪರ ಸಂಘಟನೆಭೋಪಾಲ್: ದೇವಸ್ಥಾನಗಳಲ್ಲಿ ಅಳವಡಿಸಿರುವ ಧ್ವನಿವರ್ಧಕ ಬಳಕೆಯನ್ನು ಪ್ರಶ್ನಿಸಿರುವ ಮಧ್ಯಪ್ರದೇಶದ ಹಿರಿಯ ಐಎಎಸ್ ಅಧಿಕಾರಿ ಶೈಲ್‌ಬಾಲಾ ಮಾರ್ಟಿನ್, ಇವು ಶಬ್ಧ ಮಾಲಿನ್ಯ ಉಂಟುಮಾಡುತ್ತಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರಿಂದ ಆಕ್ರೋಶಗೊಂಡಿರುವ ಧಾರ್ಮಿಕ ಸಂಘಟನೆಗಳು ಅಧಿಕಾರಿ ವಿರುದ್ಧ ಪ್ರತಿಭಟನೆಗೆ ಕರೆ ನೀಡಿವೆ.

    ಭೋಪಾಲ್‌ನಲ್ಲಿ ಕಳೆದ ವಾರ ದುರ್ಗಾ ದೇವಿ ವಿಗ್ರಹ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಕಿವಿಗಡಕ್ಕಿಚ್ಚುವ ಡಿಜೆ ಸದ್ದಿನಿಂದಾಗಿ 13 ವರ್ಷದ ಬಾಲಕವರ್ಷದ ಬಾಲಕ ಮೃತಪಟ್ಟ ಘಟನೆಯು, ಲೌಡ್ ಸ್ಪೀಕರ್‌ಗಳಿಂದ ಶಬ್ದ ಮಾಲಿನ್ಯ ಉಂಟಾಗುವ ಕುರಿತಾದ ಚರ್ಚೆ ಹುಟ್ಟುಹಾಕಿದೆ. ಶುಕ್ರವಾರ ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಾ ಮೋಜು ಮಾಡುತ್ತಿದ್ದ ಬಾಲಕ, ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದ.
    ಈ ಘಟನೆ ಬಳಿಕ ಮಧ್ಯಪ್ರದೇಶ ಪೊಲೀಸರು ತನಿಖೆ ಆರಂಭಿಸಿದ್ದರು. ಇದೇ ವೇಳೆ ಧ್ವನಿವರ್ಧಕಗಳ ಬಳಕೆಯ ಅಪಾಯಗಳ ಕುರಿತು ಚರ್ಚೆ ಶುರುವಾಗಿತ್ತು.

    ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಡಿಜೆ ಸಂಗೀತ ಮೊಳಗಿಸುವ ವ್ಯವಸ್ಥೆಗಳ ಬಗ್ಗೆ ಸೂಕ್ತ ಕಾನೂನು ನಿಯಮಾವಳಿಗಳ ನಿಬಂಧನೆಗಳು ಇಲ್ಲದಿರುವುದನ್ನು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು.

    ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಐಎಎಸ್ ಅಧಿಕಾರಿ ಶೈಲ್‌ಬಾಲಾ, ದೇವಸ್ಥಾನಗಳಲ್ಲಿನ ಧ್ವನಿವರ್ಧಕ ವ್ಯವಸ್ಥೆಗಳಿಂದಾಗಿ ಶಬ್ಧಮಾಲಿನ್ಯ ಉಂಟಾಗುತ್ತಿದೆ. ಹಲವಾರು ಬೀದಿಗಳಾಚೆಗೂ ಜೋರಾಗಿ ಕೇಳಿಸುವಂತಹ ಮತ್ತು ತಡರಾತ್ರಿ ಕಳೆದರೂ ಮುಂದುವರಿಯುವಂತಹ ಅಡಚಣೆಗಳು ಏಕೆ? ಇದನ್ನು ತೀವ್ರ ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.IAS Officer: ದೇವಸ್ಥಾನದ ಲೌಡ್‌ಸ್ಪೀಕರ್‌ಗಳಿಂದಲೂ ಶಬ್ದ ಮಾಲಿನ್ಯ: ಐಎಎಸ್‌ ಅಧಿಕಾರಿ -  Navasamajaಆದರೆ ಐಎಎಸ್ ಅಧಿಕಾರಿಯ ಪೋಸ್ಟ್, ಕೆಲವು ಧಾರ್ಮಿಕ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಧಿಕಾರಿ ಶೈಲ್‌ಬಾಲಾ ಅವರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಬಲಪಂಥೀಯ ಸಂಘಟನೆ ‘ಸಂಸ್ಕೃತಿ ಬಚಾವೊ ಮಂಚ್’ ಮುಖ್ಯಸ್ಥ ಚಂದ್ರಶೇಖರ್ ತಿವಾರಿ ತಿಳಿಸಿದ್ದಾರೆ.

    ಐಎಎಸ್ ಅಧಿಕಾರಿ ಶೈಲ್‌ಬಾಲಾ ಮಾರ್ಟಿನ್ ಅವರು ಸಮರ್ಪಕವಾದ ಪ್ರಶ್ನೆಯನ್ನೇ ಕೇಳಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ಹೇಳಿದ್ದಾರೆ.

    Dasara festival story &Pooja of Nine Goddess“ಧ್ವನಿವರ್ಧಕಗಳ ಬಳಕೆ ವಿರುದ್ಧ ಬಿಜೆಪಿ ಸರ್ಕಾರದ ಪಕ್ಷಪಾತಿ ಕ್ರಮದ ಕುರಿತು ಹಿರಿಯ ಅಧಿಕಾರಿ ಪ್ರಶ್ನೆಗಳನ್ನು ಎತ್ತಿದ್ದಾರೆ” ಎಂದು ಹಫೀಜ್ ತಿಳಿಸಿದ್ದಾರೆ.

  • ಯಾರಿದು ಶೈಲ್ಬಾಲಾ ಮಾರ್ಟಿನ್?

    2009ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಶೈಲ್‌ಬಾಲಾ ಮಾರ್ಟಿನ್, ಸರ್ಕಾರದ ಕ್ರಮಗಳನ್ನು ಪ್ರಶ್ನಿಸುತ್ತಿರುವುದು ಇದು ಮೊದಲ ಸಲವೇನಲ್ಲ.ಶೈಲ್‌ಬಾಲಾ ಮಾರ್ಟಿನ್ ಅವರು ಪ್ರಸ್ತುತ ಸಾಮಾನ್ಯ ಆಡಳಿತ ಇಲಾಖೆಯಲ್ಲಿ (ಜಿಎಡಿ) ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ರಾಜ್ಯ ನಾಗರಿಕ ಸೇವೆಯಲ್ಲಿ (ಎಸ್‌ಸಿಎಸ್) ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. 2017ರ ಜೂನ್ 12ರಂದು ಭಾರತೀಯ ಆಡಳಿತಾತ್ಮಕ ಸೇವೆಗೆ (ಐಎಎಸ್) ಬಡ್ತಿ ಪಡೆದಿದ್ದರು.

    ಅವರು 2014ರಲ್ಲಿ ಆರೋಗ್ಯ ಇಲಾಖೆ, 2019ರಲ್ಲಿ ಬುರ್ಹಾನ್‌ಪುರ ಪಾಲಿಕೆ ಆಯುಕ್ತೆ ಮತ್ತು ಅದೇ ವರ್ಷ ನಿವಾರಿ ಜಿಲ್ಲಾಧಿಕಾರಿ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2022ರ ಜನವರಿ 25ರಿಂದ ಅವರು ಜಿಎಡಿಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶಬ್ಧ ಮಾಲಿನ್ಯ ನಿಯಂತ್ರಣಕ್ಕಾಗಿ ಮಧ್ಯಪ್ರದೇಶ ಸರ್ಕಾರವು ಕಳೆದ ವರ್ಷ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದು ನಿರ್ದಿಷ್ಟವಾಗಿ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಯನ್ನು ನಿಯಂತ್ರಿಸುವ ಗುರಿ ಹೊಂದಿತ್ತು.

     

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×