ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಗಣತಿ ಏಕೆ? ಶಿವಮೊಗ್ಗದಲ್ಲಿ ಪೇಜಾವರ ಶ್ರೀಗಳ ಪ್ರಶ್ನೆ
ಪೇಜಾವರ ಸ್ವಾಮೀಜಿ ಜಾತಿ ಗಣತಿಯನ್ನು ಪ್ರಶ್ನಿಸಿದ್ದಾರೆ:ಜಾತಿ ಗಣತಿ ವರದಿ ಬಿಡುಗಡೆ ಕುರಿತು ನಡೆಯುತ್ತಿರುವ ಚರ್ಚೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಜಾತ್ಯತೀತ ದೇಶದಲ್ಲಿ ಜಾತಿ ಗಣತಿ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ. ಅವರು ಶಿವಮೊಗ್ಗದಲ್ಲಿನ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.
- ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮನೆಗೆ ಸೋಮವಾರ ಭೇಟಿ ನೀಡಿದ ಪೇಜಾವರ ಸ್ವಾಮೀಜ
- ಭಾರತ ಜಾತ್ಯತೀತ ರಾಷ್ಟ್ರವಾಗಿರುವಾಗ ಜಾತಿ ಗಣತಿ ಏಕೆ ಬೇಕು ಎಂದು ವಿಶ್ವಪ್ರಸನ್ನ ತೀರ್ಥ ಪ್ರಶ್ನೆ
- ಜಾತಿಗಣತಿಗಾಗಿ ಸರಕಾರವು ದೊಡ್ಡ ಮೊತ್ತ ವೆಚ್ಚ ಮಾಡಿ ವರದಿಯನ್ನು ಮುಚ್ಚಿಟ್ಟಿದೆ ಎಂದು ಟೀಕೆಶಿವಮೊಗ್ಗ: ಭಾರತ ಜಾತ್ಯತೀತ ರಾಷ್ಟ್ರವಾಗಿರುವಾಗ ಜಾತಿ ಗಣತಿ ಏಕೆ ಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನಿಸಿದರು.
- ಹೊಸಪೇಟೆಗೆ ತೆರಳುವ ಮಾರ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮನೆಗೆ ಸೋಮವಾರ ಭೇಟಿ ನೀಡಿದ ಅವರು ಗೌರವ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು
ಜಾತಿಗಣತಿಗಾಗಿ ಸರಕಾರವು ದೊಡ್ಡ ಮೊತ್ತ ವೆಚ್ಚ ಮಾಡಿ ವರದಿಯನ್ನು ಮುಚ್ಚಿಟ್ಟಿದೆ. ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಗಣತಿ ಏಕೆ ಬೇಕು. ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಎಂದು ಮತ್ತೊಂದು ಕಡೆ ಜಾತಿಗಣತಿ ಬೇಕು ಎನ್ನುತ್ತಾರೆ. ಜಾತಿ ಗಣತಿ ಏಕೆ ಎಂದು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಮಠದಿಂದ ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡುವ ಕಾರ್ಯ ಆಗುತ್ತಿದೆ. ರಾಮ ಮಂದಿರ ಶುರುವಾದ ಮೇಲೆ ಇಂತಹ ಕಾರ್ಯಗಳು ನಡೆಯುತ್ತಿದೆ. ನಮ್ಮ ಸುತ್ತಮುತ್ತಲೂ ಇರುವ ಬಡವರು ಮತ್ತು ದುಃಖಿತರಿಗೆ ಸೇವೆ ಮಾಡುವುದೇ ರಾಮನ ಸೇವೆ ಆಗುತ್ತೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಉಡುಪಿ ಶ್ರೀಕೃಷ್ಣ ಮಠಕ್ಕೂ ತಮಗೂ ಕೃಷ್ಣ ಮತ್ತು ಕನಕದಾಸರ ಸಂಬಂಧದಂತೆ ಎಂದರು. ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಬಿಜೆಪಿ ಟಿಕೆಟ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.
- “ಸಂಕ್ರಾಂತಿ ಸಂದರ್ಭ ಕೂಡಲ ಸಂಗಮದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಬ್ರಿಗೇಡ್ ಹೆಸರು ಘೋಷಣೆ ಮಾಡಲಾಗುತ್ತದೆ. ಈ ಸಂಬಂಧ ನೂರಾರು ಸ್ವಾಮೀಜಿಗಳ ಜತೆಗೆ ಚರ್ಚೆ ಮಾಡಿದ್ದೇವೆ. ಸಾಧುಸಂತರ ಮುಂದಾಳತ್ವದಲ್ಲಿ ಬ್ರಿಗೇಡ್ ಮುನ್ನಡೆಸಲಾಗುವುದು” ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತಿಳಿಸಿದರು.
Mysore Travel Guide: The Cultural Capital of Karnataka
ಅನ್ಯಾಯ ತಡೆಗಟ್ಟಲು ಕೈ ಜೋಡಿಸಿ
ಶಿರೂರ: ‘‘ಇತ್ತೀಚಿಗೆ ಹಿಂದೂಗಳ ಮೇಲೆ ದಬ್ಬಾಳಿಕೆ, ಅನ್ಯಾಯ ಹೆಚ್ಚಾಗುತ್ತಿದ್ದು, ಹಿಂದೂ ಸಮಾಜ ಒಗ್ಗೂಡಿಸುವ ಮೂಲಕ ಹಿಂದೂಗಳ ರಕ್ಷಣೆಗೆ ಬ್ರಿಗೇಡ್ ಅಸ್ತಿತ್ವಕ್ಕೆ ತರಲಾಗುತ್ತಿದೆ’’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಪಟ್ಟಣದ ಹಾಲು ಮತ ಸಮಾಜದ ಹಾಗೂ ಕಾರ್ಯಕರ್ತರು ಆಯೋಜನೆ ಮಾಡಿದ್ದ ಔತಣಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘‘ಯುವಕರು ಗಟ್ಟಿತನದಿಂದ ಜಾತಿ ಮರೆತು ಒಂದಾಗಿ ಹಿಂದೂ ಸಮಾಜಕ್ಕೆ ಅನ್ಯಾಯವಾಗುತ್ತಿರುವುದನ್ನು ತಡೆಗಟ್ಟಲು ಕೈ ಜೋಡಿಸಬೇಕು. ನಾಡಿನ ಮಠಾಧೀಶ ಶರಣರ, ಸಂತರ ನೇತೃತ್ವದಲ್ಲಿ ಬ್ರಿಗೇಡ್ಗೆ ಹೆಸರು ನಾಮಕರಣ ಮಾಡಲಾಗುವುದು’’ ಎಂದರು.
‘‘ಧರ್ಮ ರಕ್ಷಣೆಗೆ ರಾಯಣ್ಣ, ಕಿತ್ತೂರು ಚನ್ನಮ್ಮಳಂತೆ ನಿಲ್ಲಬೇಕು. ಸರಕಾರ ಅಭಿವೃದ್ಧಿ ಮಾಡದೇ ಮುಡಾ, ವಾಲ್ಮೀಕಿ, ಹಗರಣದಲ್ಲಿಸಿಲುಕಿ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ. ಕಳ್ಳರಿಗೆ ಶಿಕ್ಷೆಯಾಗಬೇಕು’’ ಎಂದು ಹೇಳಿದರು.ಚಿನ್ಮಯಾನಂದ ಸ್ವಾಮೀಜಿ, ಕಾತೇಶ, ಮಲ್ಲಪ್ಪ ಆಡಿನ, ಬಸವರಾಜ ಬಿಲ್ಲಾರ, ಅರ್ಜುನ ಅಂಗಡಿ, ಮಂಜುನಾಥ ತಮ್ಮನಗೌಡರ, ಗುರಪ್ಪಗೌಡ ಪಾಟೀಲ್, ಆರ್.ಎಸ್.ಅಂಗಡಿ, ಸಂಗಮೇಶ ಹಂಡರಗಲ್, ನಿಂಗಪ್ಪ ಹಂಡರಗಲ್, ಬಾಳಪ್ಪ ಹಂಡರಗಲ್, ಸಂಗಮೇಶ ವಾಜನ್ನವರ ಇದ್ದರು.