HomeNewsಜೈಲಿನಲ್ಲಿರುವ ದರ್ಶನ್‌ ತೂಗುದೀಪಗೆ ಅನಾರೋಗ್ಯ! ಎಂಆರ್‌ಐ, ಸಿಟಿ ಸ್ಕ್ಯಾನ್‌ಗೆ ಮುಂದಾದ ವೈದ್ಯರು; ಆಸ್ಪತ್ರೆಗೆ ಶಿಫ್ಟ್

ಜೈಲಿನಲ್ಲಿರುವ ದರ್ಶನ್‌ ತೂಗುದೀಪಗೆ ಅನಾರೋಗ್ಯ! ಎಂಆರ್‌ಐ, ಸಿಟಿ ಸ್ಕ್ಯಾನ್‌ಗೆ ಮುಂದಾದ ವೈದ್ಯರು; ಆಸ್ಪತ್ರೆಗೆ ಶಿಫ್ಟ್

Spread the love

ಜೈಲಿನಲ್ಲಿರುವ ದರ್ಶನ್‌ ತೂಗುದೀಪಗೆ ಅನಾರೋಗ್ಯ! ಎಂಆರ್‌ಐ, ಸಿಟಿ                         ಸ್ಕ್ಯಾನ್‌ಗೆ ಮುಂದಾದ ವೈದ್ಯರು; ಆಸ್ಪತ್ರೆಗೆ ಶಿಫ್ಟ್

ದರ್ಶನ್ ತೂಗುದೀಪ ಆಸ್ಪತ್ರೆಗೆ ಶಿಫ್ಟ್:

ಜೈಲಿನಲ್ಲಿರುವ ದರ್ಶನ್‌ ತೂಗುದೀಪಗೆ ಅನಾರೋಗ್ಯ ಹಿನ್ನೆಲೆ ಎಂಆರ್‌ಐ, ಸಿಟಿ ಸ್ಕ್ಯಾನ್‌ಗೆ ಮುಂದಾಗಿದೆ. ವೈದ್ಯರು ಆಸ್ಪತ್ರೆಗೆ ಶಿಫ್ಟ್‌ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಟನ ಪತ್ನಿ ವಿಜಯಲಕ್ಷ್ಮಿ ಕೂಡ ಹಾಜರಿದ್ದಾರೆ. ಇನ್ನು ಮಂಗಳವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಅಗತ್ಯ ದಾಖಲೆ ಕೇಳಿ ವಿಚಾರಣೆ ಮುಂದೂಡಿತ್ತು. ಹೆಚ್ಚಿನ ವಿವರ ಇಲ್ಲಿದೆ.

ಹೈಲೈಟ್ಸ್‌:

  • ಜೈಲಿನಲ್ಲಿರುವ ದರ್ಶನ್‌ ತೂಗುದೀಪಗೆ ಅನಾರೋಗ್ಯ ಹಿನ್ನೆಲೆ ಎಂಆರ್‌ಐ, ಸಿಟಿ ಸ್ಕ್ಯಾನ್‌.
  • ನಟನ್ನು ವೈದ್ಯರು ಆಸ್ಪತ್ರೆಗೆ ಶಿಫ್ಟ್‌ ಮಾಡುತ್ತಿದ್ದು, ಪತ್ನಿ ವಿಜಯಲಕ್ಷ್ಮಿ ಹಾಜರು.
  • ಮಂಗಳವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಅಗತ್ಯ ದಾಖಲೆ ಕೇಳಿದೆ.ನಟ ದರ್ಶನ್‌ ತೂಗುದೀಪ (ಸಾಂದರ್ಭಿಕ ಚಿತ್ರ)ಬಳ್ಳಾರಿ: ಕೊಲೆ ಪ್ರಕರಣದ ಆರೋಪದಲ್ಲಿ ಬಂಧಿಯಾಗಿರುವ ನಟ ದರ್ಶನ್ ಅವರಿಗೆ ತೀವ್ರ ಬೆನ್ನು ನೋವು ಹಿನ್ನೆಲೆ ಎಂಆರ್ ಐ ಹಾಗು ಸಿಟಿ ಸ್ಕ್ಯಾನ್‌ಗಾಗಿ ಬಳ್ಳಾರಿಯ ಕಾರಗೃಹದಿಂದ ವಿಮ್ಸ್ ಗೆ ಕರೆದೊಯ್ಯಲು ಜೈಲಿನ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

    Angarki Chaturthi 2024: Step-by-Step guide to worship Lord Ganesh

    ಜೈಲಿನಲ್ಲಿರುವ ಪತಿ ನಟ ದರ್ಶನ್ ಅವರನ್ನು ಭೇಟಿಯಾಗಲು ಮಂಗಳವಾರ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದರು. ಎಂದಿನಂತೆ ಪತಿಗಾಗಿ ಎರಡು ಬ್ಯಾಗ್ ನಲ್ಲಿ ತಿಂಡಿ ತಿನಿಸು, ಬಟ್ಟೆಗಳೊಂದಿಗೆ ಬಂದ ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಅವರೊಂದಿಗೆ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು.

    Kangana Ranaut&s baseless statements…&: BJP leader criticises actor-MP for farm laws remarks

    ಆಸ್ಪತ್ರೆಗೆ ಶಿಫ್ಟ್ಗೆ ಸಿದ್ಧತೆ

    ಪತ್ನಿಯನ್ನು ಭೇಟಿಯಾಗಲು ಹೈಸೆಕ್ಯೂರಿಟಿ ಸೆಲ್ ನಿಂದ ವಿಜಿಟರ್ ಕೊಠಡಿಗೆ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ ತೀವ್ರ ನಿಧಾನಗತಿಯಲ್ಲಿಯೇ ಆಗಮಿಸಿದರು. ಕುಟುಂಬಸ್ಥರು ಜೈಲಿಗೆ ಭೇಟಿ ನೀಡಿದ ವೇಳೆ ದರ್ಶನ್‌ಗೆ ಬೆನ್ನು ನೋವು ಹಿನ್ನೆಲೆ ಅವರನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಲು ವಿಮ್ಸ್ ವೈದ್ಯರು ಸೂಚಿಸಿರುವ ಬಗ್ಗೆ ಜೈಲಿನ ಅಧಿಕಾರಿಗಳು ಕುಟುಂಬಸ್ಥರಿಗೆ ಮನವೊಲಿಸಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಿದ ದರ್ಶನ್ ಅವರನ್ನು ಸಂಜೆ 6 ಗಂಟೆ ಮೇಲ್ಪಟ್ಟು ವಿಮ್ಸ್ ಆಸ್ಪತ್ರೆಗೆ ಜೈಲಿನ ಸಿಬ್ಬಂದಿ ಕರೆದೊಯ್ಯಲಾಗುತ್ತಿದೆ. ಆಸ್ಪತ್ರೆಗೆ ದರ್ಶನ್ ಪತ್ನಿ ಸಹ ಬರುವ ಸಾಧ್ಯತೆಯಿದೆ.65 ದಿನಗಳಿಂದ ಜೈಲಿನಲ್ಲಿರುವ ದರ್ಶನ್ ಮೊದಲ​ ಫೋಟೋ ವೈರಲ್​​; ಒಂದು ಕೈಯಲ್ಲಿ ಕಾಫಿ ಮಗ್ಗು.. ಮತ್ತೊಂದು ಕೈಯಲ್ಲಿ ಸಿಗರೇಟ್

    ಜಾಮೀನು ಅರ್ಜಿ ವಿಚಾರಣೆ

    ಮಂಗಳವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ವಿಚಾರಣೆಯನ್ನು 6 ದಿನ ಮುಂದೂಡಿದೆ. ನಟನ ಅನಾರೋಗ್ಯ ಕಾರಣಕ್ಕೆ ಜಾಮೀನು  ನೀಡುವಂತೆ ಹಿರಿಯ ವಕೀಲ ಸಿವಿ ನಾಗೇಶ್‌ ಅವರು ಕೋರ್ಟ್‌ ಗಮನಕ್ಕೆ ತಂದರು. ಈ ಹಿನ್ನೆಲೆ ನಟ ಆರೋಗ್ಯ ಸ್ಥಿತಿ ಬಗ್ಗೆ ಅಗತ್ಯ ದಾಖಲೆ ಸಲ್ಲಿಸುವಂತೆ ಬಳ್ಳಾರಿ ಜೈಲಾಧಿಕಾರಿಗಳಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ

     

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×