HomeNewsDo not care about a thousand notices: thundered Pradeep Eshwar - kannadaಸಾವಿರ...

Do not care about a thousand notices: thundered Pradeep Eshwar – kannadaಸಾವಿರ ನೋಟಿಸ್‌ ಕೊಡಲಿ ಡೋಂಟ್‌ಕೇರ್‌: ಗುಡುಗಿದ ಪ್ರದೀಪ್ ಈಶ್ವರ್

Spread the love

ಸಾವಿರ ನೋಟಿಸ್ಕೊಡಲಿ ಡೋಂಟ್ಕೇರ್‌: ಗುಡುಗಿದ ಪ್ರದೀಪ್ ಈಶ್ವರ್

ಇಡಿ ಮತ್ತು ಐಟಿ ರೈಡ್ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ:ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್‌ನ ಗುಂಡಿಗೆ ಇದ್ದ ಹಾಗೆ ಎಂದಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಅವರನ್ನು ನೇರವಾಗಿ ಎದುರಿಸಲು ಸಾಧ್ಯವಿಲ್ಲದೆ ಬಿಜೆಪಿಯವರು ಇಡಿ ಹಾಗೂ ಐಟಿ ಮೂಲಕ ಹೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

  • ಸಿದ್ದರಾಮಯ್ಯ, ಶಿವಕುಮಾರ್‌ ಅವರು ಕಾಂಗ್ರೆಸ್‌ನ ಗುಂಡಿಗೆ ಇದ್ದಂತೆ ಎಂದ ಪ್ರದೀಪ್ ಈಶ್ವರ್
  • ನೇರವಾಗಿ ಎದುರಿಸಲು ಸಿದ್ಧವಿಲ್ಲದ ಬಿಜೆಪಿಯಿಂದ ಐಟಿ, ಇಡಿ ಮೂಲಕ ಬೆದರಿಸಲು ಪ್ರಯತ್ನ
  • ರಾಜಕೀಯ ಪ್ರೇರಿತವಾಗಿ ಬಿಜೆಪಿಯವರು ಈ ಎಲ್ಲ ದಾಳಿಗಳನ್ನು ಮಾಡಿಸುತ್ತಿದ್ದಾರೆBreaking News: ಇನ್ನು ಕೆಲವೇ ಗಂಟೆಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ರಾಜಿನಾಮೆ?:  ಪ್ರತಾಪ್ ಸಿಂಹ ಟ್ವೀಟ್!ಚಿಕ್ಕಬಳ್ಳಾಪುರ: ಇಡಿ, ಐಟಿ ದಾಳಿಗೆಲ್ಲ ಹೆದರುವ ಪ್ರಶ್ನೆಯೇ ಇಲ್ಲ. ಅವರು ಸಾವಿರ ನೋಟಿಸ್‌ ಕೊಡಲಿ, ಡೋಂಟ್‌ ಕೇರ್‌. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಯಾರೂ ಏನು ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಪ್ರದೀಪ್‌ ಈಶ್ವರ್‌ ತಿಳಿಸಿದರು.

    The Able And People-Friendly Ruler

  •  

    ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಡಿ, ಐಟಿಯವರು ಅದೇನು ಮಾಡ್ತಾರೋ ಮಾಡಿಕೊಳ್ಳಲಿ. ನಾವು ಕಾನೂನು ಹೋರಾಟ ಮಾಡಲು ಸಿದ್ಧರಿದ್ದೇವೆ. ಸಿದ್ದರಾಮಯ್ಯ, ಶಿವಕುಮಾರ್‌ ಅವರು ಕಾಂಗ್ರೆಸ್‌ನ ಗುಂಡಿಗೆ ಇದ್ದಂತೆ. ನೇರವಾಗಿ ನಮ್ಮನ್ನು ಎದುರಿಸಲು ಸಿದ್ಧವಿಲ್ಲದ

  • ಬಿಜೆಪಿಯವರು ಇಡಿ, ಐಟಿ ಮೂಲಕ ಹೆದರಿಸಲು ಹೊರಟಿದ್ದಾರೆ. ಆದರೆ ನಾವು ಇದ್ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
  • ರಾಜಕೀಯ ಪ್ರೇರಿತವಾಗಿ ಬಿಜೆಪಿಯವರು ಈ ಎಲ್ಲ ದಾಳಿಗಳನ್ನು ಮಾಡಿಸುತ್ತಿದ್ದಾರೆ. ಸಿದ್ದರಾಮಯ್ಯನವರೇ ನಮ್ಮ ಸಿಎಂ. ಬಿಜೆಪಿಯವರ ಇಂತಹ ಬೆದರಿಕೆಗೆ ನಾವು ಜಗ್ಗಲ್ಲ. ಇಡಿ, ಐಟಿಯವರ ನೋಟಿಸ್‌ಗಳಿಗೆ ನಾವು ಕೇರ್‌ ಮಾಡಲ್ಲ. ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.

    ತಾಲೂಕು ಕೇಂದ್ರದಲ್ಲಿ ನಡೆಯುತ್ತಿರುವ ಗಣಿಗಾರಿಕೆ, ಕ್ರಷರ್‌ಗಳ ಬಗ್ಗೆ ನನ್ನ ವಿರೋಧ ಹಿಂದೆಯೂ ಇತ್ತು, ಮುಂದೆಯೂ ಇರಲಿದೆ. ಈಗಾಗಲೇ ನಂದಿಬೆಟ್ಟ ಸೇರಿದಂತೆ ಎಲ್ಲೆಡೆ ಇರುವ ಅಕ್ರಮ ಗಣಿಗಾರಿಕೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ತಿಳಿಸಿದರು.

    ಶಾಸಕನಿಗೆ ಇಡೀ ಕ್ಷೇತ್ರದಲ್ಲಿ ಗಣಿಗಾರಿಕೆ ನಿಲ್ಲಿಸುವ ಅಧಿಕಾರವಿದೆ ಎಂದು ತೋರಿಸಿದರೆ ಅಂದೇ ನಾನು ಆ ಕಡತಕ್ಕೆ ಸಹಿ ಹಾಕಿ ಇಡೀ ಗಣಿಗಾರಿಕೆಯನ್ನು ಬಂದ್‌ ಮಾಡಿಸುತ್ತೇನೆ. ಆದರೆ ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ಇದನ್ನು ಸದನದಲ್ಲೂ ಪ್ರಸ್ತಾಪಿಸಿ ಇದಕ್ಕೊಂದು ಅಂತ್ಯ ಹಾಡಲಿದ್ದೇನೆ ಎಂದು ಪ್ರದೀಪ್‌ ಈಶ್ವರ್‌ ತಿಳಿಸಿದರು.

    ಕೆ ಸುಧಾಕರ್ಗೆ ಎಂಸಿ ಸುಧಾಕರ್ ಟಾಂಗ್

    ಚಿಂತಾಮಣಿ: ಕಲ್ಯಾಣಿಗಳ ಅಭಿವೃದ್ಧಿಯಿಂದಾಗಿ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ. ಆ ಮೂಲಕ ಬೋರ್‌ವೆಲ್‌ಗಳಲ್ಲಿ ನೀರು ಮರುಪೂರಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್‌ ತಿಳಿಸಿದರು

  • ತಾಲೂಕಿನ ಇತಿಹಾಸ ಪ್ರಸಿದ್ಧ ಆಲಂಬಗಿರಿಯ ಪುರಾತನ ಕಲ್ಯಾಣಿ ಅಭಿವೃದ್ಧಿಗೆ 37 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 220 ಹಳ್ಳಿಗೆ ಕುಡಿಯುವ ನೀರಿನ ಫಿಲ್ಟರ್‌ಗಳನ್ನು ಅಳವಡಿಸುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ 35ಕ್ಕೂ ಹೆಚ್ಚು ಹಳ್ಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿರುವುದಾಗಿ ತಿಳಿಸಿದರು.
    ಕೇವಲ ಸರಕಾರದಿಂದ ಮಾತ್ರವೇ ಎಲ್ಲಕಾರ್ಯಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಇದರೊಂದಿಗೆ ನಾನಾ ವರ್ಗಗಳ ಸಂಘ ಸಂಸ್ಥೆಗಳ ಸಾರ್ವಜನಿಕ ಸಹಕಾರದೊಂದಿಗೆ ಜಿಪಂ, ತಾಪಂ, ಗ್ರಾಪಂ, ಅನುದಾನಗಳೊಂದಿಗೆ ಅಭಿವೃದ್ಧಿಗೆ ಪಣತೊಟ್ಟಿರುವುದಾಗಿ ತಿಳಿಸಿದರು.

    ಎರಡು ಕೋಟಿ ಶಾಸಕರ ಅನುದಾನದಲ್ಲಿ ವಿಕಲಚೇತನರಿಗೆ 200 ತ್ರಿಚಕ್ರ ವಾಹನಗಳನ್ನು ನೀಡುವುದು ಹಾಗೂ 200 ಕಿ.ಮೀ. ಉದ್ದದ ಗ್ರಾಮಾಂತರ ರಸ್ತೆಗಳನ್ನು ಮಾಡಿಸುವ ಭರವಸೆಯನ್ನು ನೀಡಿದರು.

    ಭಾಷಣದ ವೇಳೆ ಸಂಸದ ಕೆ.ಸುಧಾಕರ್‌ ವಿರುದ್ಧ ಕುಟುಕಿದ ಅವರು, ಸಂಸದ ಡಾ.ಕೆ.ಸುಧಾಕರ್‌ಗೆ ಮಾಹಿತಿ ಕೊರತೆ ಇದೆ. 3-4 ವರ್ಷ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದು, ಕೆಲವು ಯೋಜನೆಗಳನ್ನು ನಾನೇ ಮಂಜೂರು ಮಾಡಿಸಿದ್ದಾಗಿ ಹೇಳುತ್ತಾರಾದರೂ ಸಂಸದ ಡಾ.ಸುಧಾಕರ್‌ ಅವರಿಗೆ ಮಾಹಿತಿ ಕೊರತೆಯಿದೆ. ಇಂಟರ್‌ನೆಟ್‌ನಲ್ಲಿ ಹುಡುಕಿದರೆ ಎಲ್ಲ ಮಾಹಿತಿ ಲಭ್ಯವಾಗುತ್ತದೆ ಎಂಬುದನ್ನು ಅವರು ಮರೆತ್ತಿದ್ದಾರೆ ಎಂದು ಹೇಳಿದರು.

    50 ಹಾಸಿಗೆ ಸಾಮರ್ಥ್ಯದ ಐಸಿಯು ಘಟಕವನ್ನು ಚಿಂತಾಮಣಿಗೆ ತೆಗೆದುಕೊಂಡು ಹೋಗಿದ್ದಾರೆಂದು ಆರೋಪಿಸುವುದರಲ್ಲಿ ಹುರಳಿಲ್ಲಎಂದ ಸಚಿವ ಡಾ.ಸುಧಾಕರ್‌, ಪೆರೇಸಂದ್ರದಲ್ಲಿ ಯಾವ ಪುರುಷಾರ್ಥಕ್ಕೆ ಮೆಡಿಕಲ್‌ ಕಾಲೇಜು ಸ್ಥಾಪನೆ ಮಾಡಿದ್ದೀರೆಂದು ಪ್ರಶ್ನಿಸಿದರು.

    ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ 8 ಕೋಟಿ ಹಾಗೂ ಚಿಕ್ಕಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಗೆ 20 ಕೋಟಿ ರೂ.ಗಳನ್ನು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್‌ ಬಳಿ ಕೇಳಿದ್ದು, ಅದನ್ನು ನೀಡುವ ಭರವಸೆ ನೀಡಿದ್ದಾರೆ ಎಂದರು.

     

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×